Sunday, October 16, 2011

ಬೆ೦ಗಳೂರಿನತ್ತ....


ಮಲೆನಾಡು,ಕರಾವಳಿ,ಬಯಲು
ಪಯಣ ಮುಗಿಸಿ
ರಾಜಧಾನಿ ನಗರಿಗೆ
ಬ೦ದಿಳಿದಿಹೆನು....
                ಜ೦ಟಿ ವಾಹನಗಳ
                ಗ೦ಟೆ ಪ್ರಯಾಣದಲಿ
                ನೂರು ಕನಸುಗಳ 
                ಹೊತ್ತ  ಯಾತ್ರೆಯಲಿ....
 ನೂರು ಪ್ರಶ್ನೆ,ನೂರು ದಾರಿಗಳ
 ನಡುವೆ ಒ೦ದು ದಾರಿಯ ಹಿಡಿದು
ಆ ದಾರಿಯಲಿ ಬೆಳಕಿನ 
ಜಾಡು ಹಿಡಿದು....
             ಹಳೆ ಗೆಳೆಯರ ಬಳಗಕ್ಕೆ
             ಹೊಸ ತ೦ತ್ರಜ್ಞಾನ ಗೆಳೆಯರು
              ಸೇರಿರಲು..
             ಸಾಗರವೇ ಹರಿದಿದೆ .....
ಇನ್ನೂ ನೂರಾರು ಪ್ರಶ್ನೆ,
ಉತ್ಸಾಹ,ಕುತೂಹಲ,
ಅ೦ಜಿಕೆ,ಸ೦ತೋಷ
ಮತ್ತಿನ್ನೇನು???!!!!!!!
                        -ಪಾರ್ಥವಿ 

ಯಾವ ಮೋಹನ ...


ಯಾವ  ಮೋಹನ ಮುರಳಿ ಕರೆಯಿತೋ 
ದೂರ ತೀರಕೆ ನಿನ್ನನು....
ಯಾವ ಬೃ೦ದಾವನವು ಸೆಳೆಯಿತೋ
ನಿನ್ನ ಆ ಪುಟ್ಟ ಕಣ್ಣನು .....
             ಯಾವ ಮೋಹನ ಯಾವ ರಾಧೆಗೋ
             ನನ್ನ ಜೀವನ ನನ್ನ ಶ್ಯಾಮಗೆ...
            ಯಾವ ತೀರದ ದೂರ ಪ್ರಯಾಣವೋ
            ನನ್ನ ಮನ ನನ್ನ ಪ್ರಾಣಕೆ....
ಪ್ರೀತಿರಾಗದ ಕರ್ತೃ ನೀನು 
ಪ್ರೇಮರೋಗವ ನನಗಚ್ಚಿದವನು 
ಮದ್ದು  ತರಲು ಹೋದ ನನ್ನ ಮುದ್ದು ನೀನು,
ದಾರಿ ತಪ್ಪಿರುವೆಯಾ ನೀನು?!
               ತ೦ಗಾಳಿಯ ಬಳಿ ಕಳಿಸಿಹೆನು ನೂರು ಸ೦ದೇಶ
               ಉತ್ತರಕ್ಕಾಗಿ ಹಾತೊರೆಯುತಿದೆ ನನ್ನ ಅಕ್ಷಿ...
               ಕಲಿಸುತಿಹೆನು ಈ ಕವನ ನಿನಗೋಸ್ಕರ 
               ಪತ್ರ ಬರೆ ಆ ಸೂರ್ಯ ಸಾಕ್ಷಿ.....
                                                   -ಪಾರ್ಥವಿ