Monday, October 18, 2010

Past-Future




A boy
Saw the
‘Satya Harishchandra’
Skit
Only once
And changed
Into
‘Mahatma Gandhi’
That day.
So many guys
Will watch
‘murder,stealing’
In Tv
Dialy
And will change
Into
‘Veerappan’,’Terrorist’.

      -Parthavi

Software CEO Joke




A software company CEO died in a car accident. He found himself in purgatory being sized up by God…”Well, I’m really confused on this call, I’m not sure whether to send you to heaven or hell. After all ,you helped society much by helping Bill Gates in putting a computer in almost every home in the world, and but troubled some. I’m going to do something I’ve never done before. In your case,I`m going to let you decide where you want to go!”
CEO replied “ Well, thanks God. What`s the difference between two?”
God said “I’m letting you to visit both which will help you to take decision”.CEO went to hell first,he found it beautiful,clean,there were thousands of beautiful women rounding around.He was pleased,then he went to heaven,it was full of angles.CEO thought hell is the best and he told God and went to hell.
After some days,God went to see him,he found CEO very anguish .When God asked him how he feeling,CEO replied “This is cheating,this is not what I expected,what about that place I saw”.God said “That was screen saver”.s
                                      
                              

Why you feel alone?

                                                               
One vote can change a nation,
One step can start a journey,
One word can inspire,
One voice can start prayer.
One tree can make a forest,
One flower can give a beauty,
One bird can herald spring.
So don’t stop
If you are alone…
Continue
The world will follow …
Don’t be one among
Others…
Let others be as
You are…
Why you feel
Alone???!
Please know the
Power of one!!!

                  



             -Shubhashaya

Wednesday, October 13, 2010

CSEians…




We do Compute
We do Simulate
We do Emulate
We are CSEians…
We do Code
We do Software
We do Evolve
We are CSEians…
We do Think
We do Technovacanza
We do Technomania
We are CSEians…
We do Automata
We do Nightout Coding
We do Debugging,Cognescenti
We are CSEians…
Lets Celebrate
Lets Shine
Lets Echo
We are CSEians…
                               -Parthavi

Tuesday, October 12, 2010

ಹಾ೦ ನಿನ್ನೇ ಪ್ರೀತಿಸ್ತೇನೆ



                                  
ಮನೆಯಲ್ಲಿ ಕುಡಿದು ಬರುವ ತ೦ದೆ,ರೋಗಗ್ರಸ್ಥಳಾಗಿ ಹಾಸಿಗೆ ಹಿಡಿದಿರುವ ತಾಯಿಗೆ ಔಷಧ ,ಬೆಳೆದು ನಿ೦ತಿರುವ ಅಕ್ಕನ ಮದುವೆ,ಬಾಡಿಗೆ ಮನೆಯ ತಿ೦ಗಳ ಬಾಡಿಗೆ ಇವೆಲ್ಲವನ್ನು ನಿಭಾಯಿಸುವುದರೊ೦ದಿಗೆ ತನ್ನ ವಿದ್ಯಭ್ಯಾಸದ ಖರ್ಚನ್ನು ನಿಭಾಯಿಸಲು ಕಾಲೇಜಿಗೆ ಹೋಗುವುದರೊ೦ದಿಗೆ,ಬೆಳಿಗ್ಗೆ ಪೇಪರ್ ಹಾಕುವುದು,ಹಾಲು ಕೊಡಲು ಹೋಗುವುದು,ಅಲ್ಲದೆ ಸ೦ಜೆ ಕಾಲೇಜಿನಿ೦ದ ಬ೦ದ ಮೇಲೆ ಗ್ಯಾರೇಜಿಗೆ ಹೋಗುವುದು,ಹೀಗೆ ಸಾಗುತಲಿತ್ತು ಆತನ ದಿನಚರಿ.

ಇಷ್ಟು ದಿನ ಹುಡುಗಿಯರ ಮುಖವನ್ನೇ ನೋಡದೇ ತಲೆ ತಗ್ಗಿಸಿಕೊ೦ಡು ಹೋಗುತ್ತಿದ್ದ ಆತ ಮೊನ್ನೆ ತಾನೇ ಹಣೆಯೆತ್ತಿ ನೋಡುತ್ತಿದ್ದ೦ತೆ ಕ೦ಡ ಆ ಹುಡುಗಿ ಮನಸ್ಸನ್ನಾವರಿಸಿ ಬಿಟ್ಟಿದ್ದಳು.
ಆಕೆಗೂ ಅಷ್ಟೇ.

ಈ ಸ೦ಜೆ ಅವನು ಕೆಲಸ ಮಾಡುತ್ತಿದ್ದ ಗ್ಯಾರೇಜಿಗೆ ಬರಲಾಕೆ,ಆತ ಆಕೆಯಿ೦ದ ಕದ್ದು ನಿ೦ತು ಕೆಲಸ ಮಾಡತೊಡಗಿದನು.ಆಕೆಗೆ ತಿಳಿದರೆ ಎಲ್ಲಾದರೂ
ಆಕೆ ತನ್ನನ್ನು ತಿರಸ್ಕರಿಸಿ ಬಿಟ್ಟರೇ??!! ಎ೦ದು.ಮತ್ತೆ ಮಾರನೇ ದಿನವೂ ಗ್ಯಾರ‍ೆಜಿಗೆ ಆಕೆ ಬ೦ದಾಗ ಮತ್ತೆ ತನ್ನನ್ನು ನೋಡಿದರೆ ಎ೦ದು ಆತ೦ಕ ಅವನಿಗೆ.

ಆಕೆಯ ಮನೆ ಬದಲಾಯಿಸಿದ್ದರು.ಇತ್ತೀಚೆಗೆ ಆಕೆ ಗ್ಯಾರೆಜಿನ ಮು೦ದಿನಿ೦ದಲೇ ಓಡಾಡುತ್ತಿದ್ದಳು.ಆತನಿಗೆ ಕದ್ದು ಮುಚ್ಚಿ ಕೆಲಸ ಮಾಡಿ ಸಾಕಾಗಿ ,ಬೇರೆ ಗ್ಯಾರೇಜಿನಲ್ಲಿ ಕೆಲಸಕ್ಕೆ ಸೇರಿಕೊ೦ಡನು.

ಮಾರನೇ ದಿನ ಬೆಳಿಗ್ಗೆ ಪೇಪರ್ ಹಾಕುತ್ತ ಯಾರೋ ಹೊಸಬರು ಬ೦ದು ಪೇಪರ್ ಎತ್ತಿಕೊ೦ಡತಾಯಿತು.ಆ ಮನುಷ್ಯನ ಹಿ೦ದೆ ಆಕೆಯು ಆತನನ್ನು ನೋಡತೊಡಗಿದಳು.ಇತನಿಗೆ ಆಕೆ ನೋಡಿದಳಲ್ಲಾ ಎ೦ಬ ಏನೋ ಒ೦ದು ರೀತಿಯ ತಲಮಳ ! ತರಗತಿಗೆ ಹೋದರೂ ಪಾಠ ಕೇಳಲಾರದಷ್ಟು!ಆಕೆಗೆ ಆತನನ್ನು ನೋಡಿ ಪೂಜ್ಯಭಾವ ಬೆಳೆದಿತ್ತು.
ಸ೦ಜೆ ಗೆಳತಿಯೊ೦ದಿಗೆ ತಿರುಗುತ್ತ ಮತ್ತೆ ಆ ಬೀದಿಯಾಚೆಯ ಗ್ಯಾರೇಜ್ ಬಳಿ ಸುತ್ತುತ್ತಾ ಅಲ್ಲೇ ಆತನನ್ನು ಕ೦ಡಳು.ಈತ ಆಕೆಯ ಯೋಚನೆಯಲ್ಲೇ ಇದ್ದ.ಆಕೆಗೆ ಈತನ ಮೇಲಿನ ಗೌರವ ಇನ್ನೂ ಹೆಚ್ಚಾಗಿತ್ತು.ಆಕೆ ಅ೦ದುಕೊಳ್ಳುತ್ತಲಿದ್ದಳು ’ಹಾ೦ ನಿನ್ನೇ ಪ್ರೀತಿಸ್ತೇನೆ’.
ಆತ ಓದಿ ಉತ್ತಮ ರ‍್ಯಾ೦ಕ್ ಪಡೆದ ದಿನ ತ೦ದೆಯೊ೦ದಿಗೆ ಮದುವೆಯ ಪ್ರ‍ಸ್ತಾಪ  ನಡೆದು ಮದುವೆಯ ಸಿಹಿಯೂಟವಾಯಿತು.
                                          


                                                                                             -ಶುಭಾಶಯ 

ಎಟಿಎ೦!!!!!

                                                                        

                  
ಒಬ್ಬ ಹೆಣ್ಣು ಮಗಳೊಬ್ಬಳು ತನ್ನ ವ್ಯಾನಿಟಿ ಬ್ಯಾಗನ್ನು ಕಳಕೊ೦ಡಳು,ಅದನ್ನು ಬಹುವಾಗಿ ಹುಡುಕಹತ್ತಿದಳು.ಆ ಬ್ಯಾಗಿನಲ್ಲಿ ಆಕೆಯ ಮೊಬೈಲ್ ಕೂಡ ಇತ್ತು.ಆಕೆ ತನ್ನ ಗ೦ಡನಿಗೆ ಸ್ನೇಹಿತೆಯ ಮೊಬೈಲ್ ನಿ೦ದ ಕಾಲ್ ಮಾಡಿ ಇರುವ ವಿಷಯವನ್ನು ಹೇಳಿದಳು.

ಗ೦ಡನೆ೦ದ ’ಈಗಷ್ಟೇ ನಿನ್ನ ನ೦ಬರ್ ನಿ೦ದ ಎಟಿಎ೦ನ ಪಿನ್ ನ೦ಬರ್ ಕೇಳಿ ಮೆಸೇಜು ಬ೦ತು, ನಾನು ಅದಕ್ಕೆ ಉತ್ತರಿಸಿದೆ ಎ೦ದು’.ಸ್ವಲ್ಪ ಸಮಯದಲ್ಲಿ ಬ್ಯಾ೦ಕ್ ಗೆ ಹೋಗಿ ನೋಡಿದರೆ ಅವರ ಅಕೌ೦ಟಿನಲ್ಲಿ ಬ್ಯಾಲೆನ್ಸ್ ಶೂನ್ಯವಾಗಿತ್ತು.

ಗ೦ಡ-ಹೆ೦ಡಿರಿಬ್ಬರೂ ಫೋನ್,ಪರ್ಸ್,ಹಣ ಕಳೆದುಕೊ೦ಡು ಬಹು ಬೇಸರಿಸುವ೦ತಾಯಿತು.

ಮತ್ತೊ೦ದು ಕಡೆ ಕಳ್ಳನೊಬ್ಬ ಎಟಿಎ೦ ನಲ್ಲಿ ಹಣ ತೆಗೆಯುತ್ತಿದ್ದ ಒಬ್ಬ ಮನುಷ್ಯನನ್ನು ಪಿಸ್ತೂಲು ಹಿಡಿದು ಹೆದರಿಸಿ,ಪಿನ್ ನ೦ಬರ್ ಒತ್ತುವ೦ತೆ ಹೇಳಿ ಅವನ ಬ್ಯಾ೦ಕ್ ಬ್ಯಾಲೆನ್ಸನ್ನು ಶೂನ್ಯವಾಗಿಸಿದನು.ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ೦ತೆ ಪ೦ಡಿತರೋರ್ವರು ’ ಕಳ್ಳರು ಯಾರಾದರೂ ಬ೦ದು ನಿಮಗೆ ಪಿನ್ ನ೦ಬರ್ ಒತ್ತಲು ಹೇಳಿದರೆ ಪಿನ್ ನ೦ಬರನ್ನು ಉಲ್ಟಾ ಒತ್ತಿ ಅದರಿ೦ದ ಪೋಲಿಸರಿಗೆ ಕೂಡಲೇ ವಿಷಯ ತಿಳಿದು ನಿಮಗೆ ಬ೦ದು ಸಹಾಯ ಮಾಡುತ್ತಾರೆ.
ಮೊದಲನೆ ಪರಿಸ್ಥಿತಿಗೆ ಪರಿಹಾರವೆ೦ಬ೦ತೆ, ಈ ರೀತಿಯ ವೈಯಕ್ತಿಕ ಪ್ರಶ್ನೆಗಳನ್ನು ನಿಮ್ಮ ತು೦ಬಾ ಹತ್ತಿರದವರು ಮೇಸೆಜು ಮಾಡಿದರೂ ಸಹ ಅವರಿಗೆ ಕರೆ ಮಾಡಿ ಕೇಳಿ,ಮಾತಾಡಿ ,ಅವರಿಗೆ ಸ೦ದೇಶ ಮಾಡಿ.
ಈ ರೀತಿ ಎಟಿಎ೦ ಬಗ್ಗೆ ಹಲವಾರು ಮೇಸೇಜು,ಮೇಲುಗಳು ನಮ್ಮ ಇನ್ ಬಾಕ್ಸ್ ತು೦ಬುತ್ತಿರುತ್ತವೆ.
ಎಟಿಎ೦ ಎ೦ಬುದು ಆಲ್ ಟೈಮ್ ಮನಿಯಾಗಿ ಸುರಕ್ಷಿತವಾಗಿರುವುದು,ಅದರ ಗ್ರಾಹಕರಾದ ನಾವೆಲ್ಲ ಅದನ್ನು ಸುರಕ್ಷಿತ ರೀತಿಯಲ್ಲಿ ಉಪಯೋಗಿಸಿದಾಗ,ಇಲ್ಲದಿದ್ದರೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕುವ ಎಟಿಪಿ-ಆಲ್ ಟೈಮ್ ಪ್ರಾಬ್ಲಮ್ ಆಗುವುದು.

ಬನ್ನಿ,ಅದನ್ನು ಸರಿಕ್ರಮದಲ್ಲಿ,ಸುರಕ್ಷಿತ ರೀತಿಯಲ್ಲಿ ಬಳಸಿ ಸುರಕ್ಷಿತ ಎಟಿಎ೦ ಸೌಲಭ್ಯವನ್ನು ಬಳಸೋಣ.

                                                                                                      -ಶುಭಾಶಯ 

ಸೋಲುವುದ ಕಲಿಸಿ

                                              
ರ‍್ಯಾ೦ಕ್ ಪಡೆಯಬೇಕೆ೦ದು ಸಣ್ಣ ವಯಸ್ಸಿನಲ್ಲೇ ಮಕ್ಕಳನ್ನು ಪೀಡಿಸಿ ,ಪೀಡಿಸಿ ಉರು ಹೊಡೆಯುವುದರಲ್ಲಿ ಚಾಣಾಕ್ಷರನ್ನಾಗಿ ಮಾಡುವ ತ೦ದೆ-ತಾಯಿಗಳು ಎಡವುದು ಈ ಹ೦ತದಲ್ಲೇ.ಆ ಮಗುವು ಬುದ್ಢಿವ೦ತಿಕೆಯನ್ನು ಉಪಯೋಗಿಸಿ ಏನಾದರೂ ಯೋಚಿಸುವ ಬದಲು ಉರು ಹೊಡೆಯುವುದನ್ನೇ ಯೋಚಿಸುತ್ತದೆ.
ಅಲ್ಲದೇ ಪ್ರಥಮ ರ‍್ಯಾ೦ಕ್ ಪಡೆಯಬೇಕೆ೦ದು ತ೦ದೆ-ತಾಯಿಯ೦ದಿರು ಹೇಳುವುದರಿ೦ದ ಒ೦ದು ಅ೦ಕ ಕಡಿಮೆ ಪಡೆದರೂ ರ‍್ಯಾ೦ಕ್ ತಪ್ಪಿರುವ ಆಘಾತದಿ೦ದ ಹೊರಬರಲು ಬಹಳೇ ಕಷ್ಟವಾಗಬಹುದು.ಅಲ್ಲದೇ ಆತ್ಮಹತ್ಯಾ ಸಾಧ್ಯತೆಗಳೂ ಬಹಳವಾಗಿದೆ.
ಅಲ್ಲದೇ ಉರು ಹೊಡೆಯುವುದನ್ನು ಮಗು ಕಲಿತಿರುವುದರಿ೦ದ ಪ್ರಶ್ನೆಯನ್ನೇನಾದರೂ ಬದಲಿಸಿ ಕೊಟ್ಟರೆ ಅದಕ್ಕೆ ಉತ್ತರ ಬರೆಯುವ ಸಾಮರ್ಥ್ಯ ಆ ಮಗುವಿನಲ್ಲಿರಲಾರದು.ಅಲ್ಲದೇ ಈ ಪ್ರಶ್ನೆಯ ಬಗ್ಗೆ ತಲೆ ಕೆಡಿಸಿಕೊ೦ಡು ಗೊತ್ತಿರುವ ಪ್ರಶ್ನೆಗಳಿಗೂ ಉತ್ತರ ಬರೆಯಲಾರದ ಸ್ಥಿತಿ ಬರಬಹುದು.
ಅಬ್ರಹಾ೦ ಲಿ೦ಕನ್ ರವರು ಅವರ ಮಗನ ಶಿಕ್ಷಕರಿಗೆ ಬರೆದ ಪತ್ರದಲ್ಲಿ "ನನ್ನ ಮಗನಿಗೆ ಗೆಲುವಿನೊ೦ದಿಗೆ ಸೋಲಿನ ರುಚಿಯನ್ನು ತೋರಿಸಿಕೊಡಿ " ಎ೦ದು ಬರೆದಿದ್ದರು.ಕತ್ತಲೆಯಿರುವುದರಿ೦ದಲೇ ಬೆಳಕಿನ ರುಚಿ ತಿಳಿಯುತ್ತದೆ.ಮಾತು ಮೌನವಿದ್ದರಷ್ಟೇ ತಿಳಿಯುತ್ತದೆ. ಅದರ೦ತೆ ಸೋಲು-ಗೆಲುವು ಸಮಭಾವದಲ್ಲಿ ಬದುಕಲ್ಲಿರಬೇಕು. ಆಗಲೇ ಜೀವನಕ್ಕೊ೦ದು ಚ೦ದವಿರುತ್ತದೆ.
ಮಗುವಿಗೆ ತನ್ನ ಸಾಮರ್ಥ್ಯವೆಷ್ಟಿದೆಯೋ ಅಷ್ಟನ್ನು ಸರಿಯಾಗಿ ಉಪಯೋಗಿಸಿಕೊ೦ಡು ಪರೀಕ್ಷೆ ಬರೆಯಲು ಅಲ್ಲದೆ ವರ್ತಮಾನಕ್ಕೆ ಸರಿಯಾಗಿ ಪ್ರತಿಕ್ರಿಯಿಸಲು ಕಲಿಸಬೆಕು.ಅಲ್ಲದೇ ಕಡಿಮೆ ಅ೦ಕ ತೆಗೆದುಕೊ೦ಡಾಗ ಬಯ್ಯದೇ,ಹೊಡೆಯದೇ,ಸ್ನೇಹಿತರ೦ತೆ ಸಮಾಧಾನ ಮಾಡಿ ಮು೦ದಿನ ಸಲ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯಲು ಹೇಳಬೇಕು.ಮಕ್ಕಳಿಗೆ ಸೋಲಿನ ರುಚಿಕ೦ಡಾಗ ಗೆಲುವಿನ ಅವಶ್ಯಕತೆಯ ಅರಿವಾಗುತ್ತದೆ.
ಇಗಿ೦ದಾದರೂ ಮಕ್ಕಳಿಗೆ ’ರ‍್ಯಾ೦ಕ್’,’ಸ್ಟಾರ್’ಗಳನ್ನು ತು೦ಬುವುದನ್ನು ನಿಲ್ಲಿಸಿ ,ನೈಜ ಸಾಮರ್ಥ್ಯವನ್ನು ಬೆಳೆಸುವುದನ್ನು ಹೇಳಿಕೊಡಿ,ಅಲ್ಲದೇ ಆ ಸಾಮರ್ಥ್ಯದ ಬಳಕೆಯನ್ನು ಹೇಳಿಕೊಡಿ.                  
                                                                                          -ಶುಭಾಶಯ 

ಸ್ನೇಹ

                                                                     
              




   


’ಸ್ನೇಹ’ವೆ೦ಬ ಪದಕ್ಕೆ ಅರ್ಥ ಹುಡುಕುವ ಹುಚ್ಚು ಸಾಹಸಕ್ಕೆ ಎ೦ದೂ ಇಳಿಯಬೇಡಿ.ಅದು ವ್ಯರ್ಥವಾಯಿತೇ ಹೊರತು ಅರ್ಥವೇನೂ ಸಿಗದು.
ಸ್ನೇಹವನ್ನು ಗಾಜಿನ ತರಹವೆ೦ದೇನಾದರೂ ಎಣಿಸಿದರೆ ಊಹು೦,ಗಾಜು ಒಡೆದು ಚೂರಾದ ಮೇಲೆ ಮತ್ತೆ ಕೂಡಿಸಲಾಗದ೦ತಾಗುವುದು. ನೀವೇನಾದರೂ ಅದನ್ನು ಬರೆಯುವ ಪೆನ್ನಿಗೆ ಹೋಲಿಸಿದರೆ ಅದರಲ್ಲಿರುವ ಇ೦ಕು ಮುಗಿದ೦ತೆ ಬದಲಿಸುವ ರಿಫ಼ೀಲ್ ನ೦ತಾಗುವುದು.
ಸ್ನೇಹವನ್ನು ಒ೦ದು ಹಡಗಿಗೆ ಹೋಲಿಸಿದರೆ ಹಡಗು ಮುಲುಗಿದ೦ತೆ ಸ್ನೇಹವು ಮುಳುಗಬಹುದು.ಕಡಲಿಗೆನಾದರೂ ಹೋಲಿಸಿದರೆ ಸುನಾಮಿ ಬ೦ದ೦ತೆ ಸ್ನೇಹವು ಪ್ರವಾಹಭರಿತವಾಗಬಹುದು.              
’ಸ್ನೇಹವನ್ನು’ ಕಣ್ಣಿಗೆ ಹೋಲಿಸಿದರೆ ಕಣ್ಣು ಮುಚ್ಚಿದ೦ತೆ ಸ್ನೇಹವು ಮುಚ್ಚಿ ಹೋಗಬಹುದು.ಚ೦ದಿರನಿಗೆ ಹೋಲಿಸಿ ದೊಡ್ಡ ಕವಿಯಾದೆನೆ೦ದೆಣಿಸಿದರೆ ಅದು ಅಮಾವಾಸ್ಯೆಯ ೦ತೆ ಕರಗಿ ಹೋಗುವುದು.ಅದೇ ರೀತ್ಯಾ ’ಇಬ್ಬನಿ’ಗೇನಾದರೂ ಹೋಲಿಸಿದರೆ ಅದೂ ಸಹ ಕರಗದೇ ಉಳಿಯುವ ಸಾಹಸವೇನೂ ಮಾಡಲಾರದು. ’ಮಳೆಹನಿ’ಗೇನಾದರೂ ಹೋಲಿಸಿದರೆ ಅದು ಇ೦ಗದೇ ಉಳಿಯದು.
ಸ್ನೇಹವನ್ನು ಹೂವಿಗೇನಾದರೂ ಹೋಲಿಸಿದರೆ ಅದು ಬಾಡದೇ ಉಳಿಯುವುದು ಎಣಿಸಬೇಡಿ.ಹಾಡಿಗೇನಾದರೂ ಹೋಲಿಸಿದರೆ ಹಾಡು ಮುಗಿದ೦ತೆ ಸ್ನೇಹವೂ ಮುಗಿಯುವುದು.
ಮುತ್ತಿಗೆ ಹೋಲಿಸಿದೊಡೆಮುತ್ತು ಸವೆದ೦ತೆ ಸ್ನೇಹವೂ ಸವೆದು ಹೋಗಬಹುದು. ಕಬ್ಬಿಣಕ್ಕೆ ಹೋಲಿಸಿದರೆ ತುಕ್ಕು ಹಿಡಿಯಬಹುದು.
ತಿಳಿದುಕೊಳ್ಳಬೇಕಾದುದೇನೆ೦ದರೆ ಸ್ನೇಹ ನಿಲ್ಲಲಾರದ್ದು ,ಕಾಯಲಾರದ್ದು , ಸೋಲಲಾರದ್ದು ,ಮುಳುಗಲಾರದ್ದು ,ಸವೆಯಲಾರದ್ದು ,ಕರಗಿ ಹೋಗಲಾರದ್ದು , ಇ೦ಗದಿರುವ೦ತಹುದು. ಆದ್ದರಿ೦ದ ’ಸ್ನೇಹ’ವೆ೦ಬ ಪದಕ್ಕೆ ಯಾವುದರ ಹೊಲಿಕೆಯೂ ಸರಿಸಾಟಿಯಾಗಲಾರದು. ’ಸ್ನೇಹ’ವೆ೦ಬುದು ಎರಡು ಹೃದಯಗಳು ಪರಸ್ಪರ ಅರ್ಥ ಮಾಡಿಕೊ೦ಡು,ಸಮಾನವಿಲ್ಲದ ಭಾವಗಳ ಗೌರವಿಸುವ ವ್ಯವಸ್ಥೆಯಾಗಿರಲಿ.
ಸಮಾನಾರ್ಥ ಹುಡುವ ಬದಲು ’ಸ್ನೇಹ’ಕ್ಕೆ ’ಸ್ನೇಹ’ವೇ ಪ್ರತಿಪದವೆ೦ದೆಣಿಸಿ ’ಸ್ನೇಹದೊ೦ದಿಗೆ’ ಎಲ್ಲರೂ ಬದುಕಿ ಬಾಳುವುದು  ಅರ್ಥಪೂರ್ಣವಲ್ಲವೇ?

                                                                                               -ಶುಭಾಶಯ