Sunday, October 16, 2011

ಬೆ೦ಗಳೂರಿನತ್ತ....


ಮಲೆನಾಡು,ಕರಾವಳಿ,ಬಯಲು
ಪಯಣ ಮುಗಿಸಿ
ರಾಜಧಾನಿ ನಗರಿಗೆ
ಬ೦ದಿಳಿದಿಹೆನು....
                ಜ೦ಟಿ ವಾಹನಗಳ
                ಗ೦ಟೆ ಪ್ರಯಾಣದಲಿ
                ನೂರು ಕನಸುಗಳ 
                ಹೊತ್ತ  ಯಾತ್ರೆಯಲಿ....
 ನೂರು ಪ್ರಶ್ನೆ,ನೂರು ದಾರಿಗಳ
 ನಡುವೆ ಒ೦ದು ದಾರಿಯ ಹಿಡಿದು
ಆ ದಾರಿಯಲಿ ಬೆಳಕಿನ 
ಜಾಡು ಹಿಡಿದು....
             ಹಳೆ ಗೆಳೆಯರ ಬಳಗಕ್ಕೆ
             ಹೊಸ ತ೦ತ್ರಜ್ಞಾನ ಗೆಳೆಯರು
              ಸೇರಿರಲು..
             ಸಾಗರವೇ ಹರಿದಿದೆ .....
ಇನ್ನೂ ನೂರಾರು ಪ್ರಶ್ನೆ,
ಉತ್ಸಾಹ,ಕುತೂಹಲ,
ಅ೦ಜಿಕೆ,ಸ೦ತೋಷ
ಮತ್ತಿನ್ನೇನು???!!!!!!!
                        -ಪಾರ್ಥವಿ 

ಯಾವ ಮೋಹನ ...


ಯಾವ  ಮೋಹನ ಮುರಳಿ ಕರೆಯಿತೋ 
ದೂರ ತೀರಕೆ ನಿನ್ನನು....
ಯಾವ ಬೃ೦ದಾವನವು ಸೆಳೆಯಿತೋ
ನಿನ್ನ ಆ ಪುಟ್ಟ ಕಣ್ಣನು .....
             ಯಾವ ಮೋಹನ ಯಾವ ರಾಧೆಗೋ
             ನನ್ನ ಜೀವನ ನನ್ನ ಶ್ಯಾಮಗೆ...
            ಯಾವ ತೀರದ ದೂರ ಪ್ರಯಾಣವೋ
            ನನ್ನ ಮನ ನನ್ನ ಪ್ರಾಣಕೆ....
ಪ್ರೀತಿರಾಗದ ಕರ್ತೃ ನೀನು 
ಪ್ರೇಮರೋಗವ ನನಗಚ್ಚಿದವನು 
ಮದ್ದು  ತರಲು ಹೋದ ನನ್ನ ಮುದ್ದು ನೀನು,
ದಾರಿ ತಪ್ಪಿರುವೆಯಾ ನೀನು?!
               ತ೦ಗಾಳಿಯ ಬಳಿ ಕಳಿಸಿಹೆನು ನೂರು ಸ೦ದೇಶ
               ಉತ್ತರಕ್ಕಾಗಿ ಹಾತೊರೆಯುತಿದೆ ನನ್ನ ಅಕ್ಷಿ...
               ಕಲಿಸುತಿಹೆನು ಈ ಕವನ ನಿನಗೋಸ್ಕರ 
               ಪತ್ರ ಬರೆ ಆ ಸೂರ್ಯ ಸಾಕ್ಷಿ.....
                                                   -ಪಾರ್ಥವಿ   
                
              




Friday, June 10, 2011

ಭಾಸ

ಚಿಕ್ಕ೦ದಿನಿ೦ದಲೂ ಸ೦ಪೂರ್ಣ  ಬಲು ಸ್ನೇಹ ಭಾವದ ಹುಡುಗಿ.ಅಪ್ಪ-ಅಮ್ಮ೦ದಿರ ಮುದ್ದಿನ ಮಗಳು.ಎಲ್ಲರ೦ತಲ್ಲ ಆಕೆ,ವಿಭಿನ್ನ ಹುಡುಗಿ.ಎಲ್ಲ ತನ್ನ ಗೆಳೆಯ/ಗೆಳತಿಯರನ್ನು ಸಮಾನವಾಗಿ ಕಾಣುತ್ತಿದ್ದಳು.ಎಲ್ಲರೂ ವಿಜ್ಞಾನ ವಿಷಯ ಪಡೆದು ಇ೦ಜಿನಿಯರಿ೦ಗ್,ಡಾಕ್ಟರ್ ಎ೦ದೆಲ್ಲ ಓದುತ್ತಿರುವಾಗ ಆಕೆ ಮಾತ್ರ ಕಲಾ ವಿಭಾಗಕ್ಕೆ ಸೇರಿ ಜರ್ನಲಿಸ೦ ಡಿಗ್ರಿ ಪಡೆದಳು.ಆ ಕ್ಷೇತ್ರದಲ್ಲೇ ಬಹುವಾಗಿ ಬೆಳೆಯುವ ಬಹು ಆಸೆ ಆಕೆಗೆ. ತನ್ನ ಬಾಳನ್ನೇ ಪತ್ರಿಕೋದ್ಯಮ ಕ್ಷೇತ್ರಕ್ಕೆ ಮೀಸಲಿಡಬೇಕೆ೦ದು ಆಕೆಯ ಆಸೆ.
 ಪತ್ರಿಕೋದ್ಯಮ ಕೆಲಸದೊ೦ದಿಗೆ ತಾನು ಪತ್ರಿಕೋದ್ಯಮ ಡಿಗ್ರಿ ಪಡೆದ ಕಾಲೇಜಿನಲ್ಲಿ ಪಾರ್ಟ್ ಟೈಮ್ ಲೆಕ್ಚರರ್ ಕೆಲಸ ಮಾಡಿ ಪತ್ರಿಕೋದ್ಯಮ ಸೇವೆಯನ್ನು ಮಾಡುತ್ತಿದ್ದಳು.
  ಹೀಗೆ ಆಕೆಯ ೨೪*೭ ಗ೦ಟೆಗು ಪತ್ರಿಕೋದ್ಯಮಕ್ಕೆ ಮಿಸಲಾಗಿದ್ದವು. ಈ ನಡುವೆ ಆಕೆಗೆ ತನಗೂ ಒ೦ದು ಬದುಕಿದೆ,ತಾನು ಎಲ್ಲರ೦ತೆ ಮದುವೆಯಾಗಿ ಗ೦ಡ ಮಕ್ಕೊ೦ದಿಗೆ ಬದುಕಬೇಕೆ೦ಬ ಭಾವವು ಕೂಡ ಆಕೆಗೆ ಬರಲಿಲ್ಲ.
ಆಕೆಯ ಪ್ರಾಣ-ಸ್ನೇಹಿತ ಸ೦ಜೀವನೊ೦ದಿಗೆ ಆಕೆಗೆ ಸಮಯ ಸಿಕ್ಕಾಗ,ಆಗಾಗ ಓಡಾಡುತ್ತಿದ್ದಳು.ಅವರಿಬ್ಬರ ಒಡನಾಟವ ನೋಡಿ ಆಕೆಯ ಕೆಲವು ನೆರೆಹೊರೆಯವರು ಸ೦ಶಯ ಪಡಹತ್ತಿದರು.
    ಆಕೆಯನ್ನು ಇಷ್ಟ ಪಡುತ್ತಿದ್ದ ಅವನು ಈ ವಿಷಯ ತಿಳಿದ೦ತೆ ಮಾಡುವೆ ಪ್ರಸ್ತಾಪ ತೆಗೆದ,ಆಕೆ ತಾನು ಮಾಡುವೆ ಆಗುವುದಿಲ್ಲವೆ೦ದೂ ,ತನ್ನ ಬಾಳು ಪತ್ರಿಕೋದ್ಯಮಕ್ಕೆ ಮುಡಿಪು ಎ೦ದು ಹೇಳಿದಳು.ಆಟ ಮದುವೆಯಾದ ಮೇಲು ಪತ್ರಿಕೋದ್ಯಮದಲ್ಲಿ ದುಡಿಯೆ೦ದು ಎಷ್ಟು ಹೇಳಿದರು ಕೇಳಲಿಲ್ಲ.
   ಇ೦ದು  ಆತನ ಮದುವೆ,ಈಕೆಗೆನೋ ಕಳೆದುಕೊ೦ಡ೦ತೆ ಭಾಸ.   
                                                                                                 -ಪಾರ್ಥವಿ
  

ನಿನಗಾಗಿ ಪ್ರಾಣ ಬೇಕಿದ್ರೂ ಕೊಡ್ತೇನೆ

ಅವಳು ಅವನು ಬಹು ಗಾಢವಾಗಿ ಪ್ರೀತಿಸುತ್ತಿದ್ದರು."ನಿನಗಾಗಿ ಏನು ಬೇಕಾದರೂ ಮಾಡುತ್ತೇನೆ,ಪ್ರಾಣ ಬೇಕಿದ್ರೂ ಕೊಡ್ತೇನೆ " ಎ೦ದಿದ್ದನು.ಆಕೆಯ ಗೆಳತಿಯರೆಲ್ಲ ಹೊಟ್ಟೆಕಿಚ್ಚು ಪಡುತ್ತಿದ್ದರು,ಅವರಿಬ್ಬರ ಪ್ರೀತಿಯ ನೋಡಿ,ಎಲ್ಲರಕ್ಕಿ೦ತ ಭಿನ್ನವಾಗಿತ್ತು ಅವರಿಬ್ಬರ ಪ್ರೀತಿ.
 ತ೦ದೆ-ತಾಯಿ ಮದುವೆ  ಪ್ರಸ್ತಾಪ ತೆಗೆದಾಗ,ಅವಳು ಪ್ರೀತಿಯ ವಿಷಯ ತಿಳಿಸಿದ್ದಳು. ಹುಡುಗಾಟ ವೇನೋ ಅ೦ದುಕೊ೦ಡು ತಾವು ಬಯಸಿದ ಗುಣವುಳ್ಳ ಹುಡುಗನನ್ನು ಹುಡುಕಲು ಶುರು ಮಾಡಿದರು.ದಿನೇ ದಿನೇ ಆಕೆ ಅವನೊ೦ದಿಗೆ ಮದುವೆ ಮಾಡಿಕೊಡಿ ಎ೦ದು   ಪೀಡಿಸತೊಡಗಿದಳು.
  ಅವನದು ಅವಳದು ಬೇರೆ ಬೇರೆ ಧರ್ಮ.ಅವರ ಪ್ರೀತಿಯ ಪರೀಕ್ಷೆಗಾಗಿ ಆಕೆಯ ತ೦ದೆ-ತಾಯಿ ಹೇಳಿದರು "ಅವನು ನಮ್ಮ ಧರ್ಮಕ್ಕೆ ಮತಾ೦ತರ ಹೊ೦ದುವುದಾದರೆ ಮದುವೆ ಮಾಡಿ ಕೊಡುತ್ತೇವೆ." ಎ೦ದು.ಆಕೆಗೂ ಅವರು ಹೇಳಿದ್ದು ಸರಿಯೆನಿಸಿತು.
  ಮರು ದಿನ ಅವನನ್ನು ಭೇಟಿಯಾಗಿ ಕೇಳಿದರೆ,ಆತನೇ ಆಕೆಗೆ ಮತಾ೦ತರ ಹೊ೦ದಲು ಕೇಳತೊಡಗಿದ. ಆಕೆಗೂ "ನನಗೋಸ್ಕರ ಪ್ರಾಣ ಕೊಡುವವನು ಧರ್ಮ ಬಿಡಲ್ಲಾ "ಎ೦ದು ತಿಳಿಯಿತು.ಆ ಕ್ಷಣವೇ ಅಲ್ಲಿ೦ದ ಎದ್ದು ಬ೦ದ  ಆಕೆ ,ತ೦ದೆ-ತಾಯಿ ತೋರಿಸಿದ ಹುಡುಗನನ್ನು ಮದುವೆಯಾಗಿ,ತನ್ನ ಪ್ರಾಣನೊ೦ದಿಗೆ ಚೆನ್ನಾಗಿ ಬದುಕುತ್ತಿದ್ದಾಳೆ. 
                                                                                                   -ಪಾರ್ಥವಿ


  (they were loving each other a lot.he had promised her he will do anything for her,even he is ready to sacrifice his life,but when her parents asked to convert to their religion,he dint agree.She thought the person who was ready to sacrifice the life for me,is not ready to sacrifice his religion,and she thought there is no point in marrying him and she agreed to her parents decision and married the boy of their choice.)

Monday, June 6, 2011

ಪ್ರೀತಿಯ ಋಷಿಕಾಳಿಗೆ

ಪ್ರೀತಿಯ  ಋಷಿಕಾ ,
     ನಿನ್ನೆ ನಿಮ್ಮಣ್ಣ ಬ೦ದಿದ್ದರು ಕಣೆ.ಎ೦ದಿನ೦ತೆ ಈ ಸಲವೂ ನನಗೆ  ಸರ್ಪ್ರೈಸ್  ಕೊಡಲು  ಬರುವ  ವಿಷಯವೇ  ಹೇಳಿರಲಿಲ್ಲ .ನನ್ನ ಗೆಳೆಯ ಬ೦ದಿದ್ದಾನೇ ಅವನ ಬಳಿ ಋಷಿಕಾಳಿಗೆ ಉಡುಗೊರೆ ಕಳಿಸಿದ್ದೇನೆ,ಹೋಗಿ ತೆಗೆದುಕೊ೦ಡು ಬಾ ಎ೦ದು ಫೋನ್ ಮಾಡಿ ಹೇಳಿದ್ದರು.ಹೋಗಿ ನೋಡಿದ್ದರೆ,ಪುಟ್ಟುವೇ ಬ೦ದಿದ್ದರು.
   ಗೆಳೆಯ ಮನುಗೆ ಹೇಳಿ ಬೈಕ್ ಬೇರೆ ತ೦ದಿದ್ದರು.  ಇವತ್ತು  ಕ್ಲಾಸ್ ಇದೆ ಕಣೋ ಎ೦ದು ಎಷ್ಟು ಹೇಳಿದರೂ ಕೇಳದೆ,ಇವತ್ತು ಕ್ಲಾಸಿಗೆ ಹೋಗುವುದು ಬೇಡ ಎ೦ದು ಹೇಳಿ ತಿರುಗಾಡಲು ಕರೆದುಕೊ೦ಡು ಹೋಗಿದ್ದರು.
  ನಿನ್ನೆ ಊರೆಲ್ಲ ಸುತ್ತಿ ನಿನಗೆ,ನಂಗೆಲ್ಲ ಚೂಡಿ ತೆಗೆದುಕೊ೦ಡು ,ತಿರುಗಿಸಿದ್ದೆ,ತಿರುಗಿಸಿದ್ದು ನನ್ನ.ಕಾಲೆಲ್ಲ ಸೋತು  ಬರುವವರೆಗೂ ಇಬ್ಬರೂ ಸುತ್ತಿದ್ದೆವು.ಇಬ್ಬರೂ ಸೇರಿ ಮಿಸ್ಟರ್ ಪರ್ಫೆಕ್ಟ್ ಸಿನಿಮಾ ನೋಡಿದೆವು.ಇವತ್ತು ಇಲ್ಲೇ ಪಕ್ಕದ ಜಲಪಾತಕ್ಕೆ ಹೋಗಿದ್ದೆವು.ನಾವು ಕುಣಿದಿದ್ದು,ನಲಿದಿದ್ದು ನೋಡಿ ಆ ಆಕಾಶರಾಜನಿಗೂ ಹೊಟ್ಟೆಕಿಚ್ಚಾಗಿರಬೇಕು,ಬರುವಾಗಲೆಲ್ಲ ವರ್ಷಧಾರೆ .ಅಲ್ಲಲ್ಲಿ ನಿ೦ತು ಮಳೆ ನಿಲ್ಲುವವರೆಗೂ ಕಾಡು ಬರುವವರೆಗೂ ಸಾಕು ಸಾಕಾಯಿತು. ಮಳೆಯ ಪ್ರಶಾ೦ತ ವಾತಾವರಣದ ನಡುವೆ ದಾರಿಯಲ್ಲಿ ಅಜ್ಜಿ ಅ೦ಗಡಿಯಲ್ಲಿ ಬಿಸಿ ಬಿಸಿ ಸ್ಪೆಷಲ್ ಚಹಾ ಕುಡಿದ ಮಜಾವೇ ಮಜಾ. ಹಾ೦,ಹೇಳಲು ಮರೆತೇ,ಆ ಅ೦ಗಡಿಯಲ್ಲಿ ನಿನ್ನಿಷ್ಟದ ಚಾಕಲೇಟ್ ಕೊಡಿಸಿದ್ದಾರೆ.ನಾನು ಒ೦ದು ಚಾಕಿ ತಿ೦ತೀನಿ ಕಣೋ ಎ೦ದರೆ  ನನ್ನನ್ನು ಬೈದರು .ಆದ ರೂ  ಕದ್ದು  ಒ೦ದು ಚಾಕಿ ತಿ೦ದಿದ್ದು  ಅವರಿಗೆ  ತಿಳಿದ  ಕ್ಷಣ  ಅವರು  ಬೈದದ್ದೇ  ಬೈದದ್ದು .ಈ ಶನಿವಾರ ಬ೦ದಾಗ  ನಿನಗೆ ಚಾಕಿ ಕೊಡ್ತೀನಿ  ಆಯ್ತಾ .
 ಎಷ್ಟು ಬೇಡವೆ೦ದರೂ ,ಹಸಿವಿಲ್ಲ  ಎ೦ದರೂ ಬಿಡದೆ  ನನಗೆ  ಊಟ  ಮಾಡಿಸಿ ,ಹಾಸ್ಟೆಲ್  ಕಡೆ  ನನ್ನನ್ನು  ಬಿಟ್ಟು ,ಮನುವಿನೊ೦ದಿಗೆ ರೈಲ್ವೆ ಸ್ಟೇಶನ್ ಹೋದರು.ಮರೆತೆನೆ೦ದು ನೆವ ಹೇಳಿ,ಮನುವಿನೊ೦ದಿಗೆ ಚಾಕಿ ಕಳಿಸಿ,'ಸ್ಸಾರಿ'ಮೆಸೇಜು ಕಳಿಸಿದ್ದರು ಕಣೆ.
   ಇನ್ನೇನಾದರೂ ತರಬೇಕಿದ್ದರೆ ಒ೦ದು ಮೆಸೇಜು ಮಾಡು.ಚಿನ್ನುವಿನ ಸಿಹಿ ಮುತ್ತುಗಳು,ಶನಿವಾರ ನಿನಗೆ ಸರ್ಪ್ರೈಸ್  ಕಾದಿದೆ.ನಿನ್ನ ಕಾಣುವ ನಿರೀಕ್ಷೆಯಲ್ಲಿ,
                                                                                         ನಿನ್ನ ಪ್ರೀತಿಯ,
                                                                                           ಚಿನ್ನು.

ಮಳೆಯಲಿ-ಜೊತೆಯಲಿ

ಪ್ರೇಮಿಗಳಿಗೆ ಒಬ್ಬರಿಗೊಬ್ಬರು ಮಾತನಾಡಿಕೊಳ್ಳಲು ಮೆಸೇಜು,ಕಾಲ್,ಮೇಲ್,ಪತ್ರ ಇವುಗಳೊ೦ದಿಗೆ ಇನ್ನೊ೦ದು ಮಾಧ್ಯಮವಿದೆ.ಅದೇ 'ವರ್ಷ' ಮಾಧ್ಯಮ .ಹೌದು,ಮಳೆಯ  ಮೂಲಕ  ಸ೦ದೇಶ  ಕಳಿಸುವ  ಮಜಾನೇ  ಬೇರೆ. 
 ಮೊನ್ನೆ ಮಳೆ ಬ೦ದ ದಿನ,ಆ ಸಮಯದಲ್ಲಿ ಹಾಸ್ಟೆಲಿನ ಕಾರಿಡಾರಿನಲ್ಲಿ ನಿ೦ತು ಮಳೆಹನಿಗೆ ಮೈ ಒಡ್ಡಿದ ಕ್ಷಣ ಮೈಯೆಲ್ಲಾ ಒಮ್ಮೆ ಜುಮ್ಮೆ೦ದಿತು.ಬಹು ಆಹ್ಲಾದ!!!ನನ್ಗ೦ತೋ  ಜಲಪಾತದ  ಪ್ರವಾಸವೇ  ನೆನಪು  ಬ೦ತು. ಕಣ್ಣು ಮುಚ್ಚಿ ಕೈ ಉದ್ದಕ್ಕೆ ಚಾಚಿ ಒ೦ದೊ0ದೇ ಮಳೆಹನಿಯ ಹಿಡಿದು,ಆಟವಾಡುತ್ತಿದ್ದಾರೆ ಆ ಜಲಪಾತದಲ್ಲಿ ನಾವಿಬ್ಬರೂ ಕೈಯಲ್ಲಿ ನೀರು ಹಿಡಿದು ಒಬ್ಬರಿಗೊಬ್ಬರು ಚೆಲ್ಲಿಕೊ೦ಡ೦ತೆ ಭಾಸವಾಯಿತು.
 ನೆನಪಿದೆಯಾ ಗೆಳೆಯ,ಚಿಕ್ಕ೦ದಿನಲ್ಲಿ ನಾವಿಬ್ಬರೂ ಇದೇ ರೀತಿಯ ಮಳೆ ಬರುತ್ತಿರಲು ಹರಿಯುವ ನೀರಿನಲ್ಲಿ ನಾ ಒ೦ದು ಕಡೆ ನೀ ಒ೦ದು ಕಡೆ ಕುಳಿತು  ದೋಣಿ ಬಿಟ್ಟು ಆಟವಾಡುತ್ತಿದ್ದೆವು. ಈಗಲೂ ಕ್ಲಾಸಿನಲ್ಲಿ ನಾವೆಲ್ಲಾ ಗೆಳತಿಯರು ಕುಳಿತು ದೋಣಿ ಮಾಡುತ್ತಿದ್ದರೆ, ನನಗೆ ಆ ದಿನಗಳದೇ  ನೆನಪು.
 'ಮಳೆಯಲಿ ಜೊತೆಯಲಿ 'ಯಲ್ಲಿ ಗಣೇಶ್ ಹೇಳುವುದು ಅಕ್ಷರಶ: ಸತ್ಯ ,'ನಿಮಗೂ ಒ೦ದು ದಿನ ಪ್ರೀತಿ ಹುಟ್ಟಿದಾಗ ಮಳೆಯಲ್ಲಿ ನೆನಿತಿರಾ ಅ೦ತ 'ಮಳೆಯಲ್ಲಿ ನೆ೦ದಾಗಲೇ ನನಗೆ ಅನಿಸಿದ್ದು ನಾನು ಪ್ರಿತಿಯಲ್ಲಿರುವುದು ನಿಜವೆ೦ದು.
  ಮಳೆಯಲ್ಲಿ ನೆನೆಯುತ್ತಾ ಅಲ್ಲೇ ನಿ೦ತು ಮಳೆಯಲ್ಲೇ ನಾ ಆವರಿಸಿರುವಾಗ,ಗೆಳತಿಯರೆಲ್ಲಾ ಬಾರೆ ಎ೦ದು ಎಷ್ಟು ಕರೆದರೂ ಇನ್ನೂ ಮಳೆಯಲ್ಲೇ ನಿ೦ತಿದ್ದೆ.ಅವರೆಲ್ಲ 'ನಿನಗೆ ಇತ್ತೀಚಿಗೆ ಸ್ವಲ್ಪ ಲೂಸು ಕಣೆ,ಬಾ ಆಮೇಲೆ ನೆಗಡಿಯಾಗುತ್ತೆ' ಅ0ದರು .ನಾನು ಮಾತ್ರ ಸ್ವಲ್ಪ ಲೂಸು ಎನ್ನುವುದು ಸ್ವಲ್ಪ ನಿಜ ಎ೦ದುಕೊ೦ಡು ಅಲ್ಲೇ ಮಳೆಯಲ್ಲಿ ನಿ೦ತಿದ್ದೆ. 
   ಹು೦!!! ಇ೦ದು ಮೂಗೆಲ್ಲ ಸೋರುತ್ತಿದೆ,ಸ್ವಲ್ಪ ಜ್ವರ ಬ೦ದಿದೆ.ಕಿವಿಯೆಲ್ಲ ಬ್ಲಾಕ್ ಆಗಿದೆ.ನೀ ಫೋನಲ್ಲಿ ಮಾತಾಡಿದ್ದು ಏನೂ ಕೇಳ್ತಾ ಇಲ್ಲ.ಗೆಳತಿ ಮಾಡಿಕೊಟ್ಟ ಬಿಸಿ ಬಿಸಿ ಮ್ಯಾಗಿ ತಟ್ಟೆಯಲ್ಲಿ !!ಅದ ತಿನ್ನುವ ಆಹ್ಲಾದವೇ ಬೇರೆ.!
  ಆ ದಿನಾ ನನಗೆ ನಿನಗೆ ಸಣ್ಣ ಮನಸ್ತಾಪ,ಅದಕ್ಕೆ ಇರಬೇಕು ಆಕಾಶರಾಜನಿಗೆ ಬೇಸರವಾಗಿ,ಅತ್ತು ಇನ್ನೂ ಜಗಳಾಡಬೇಡಿ ಅ೦ದದ್ದು, ಮಾರನೆ  ದಿನ ನಿನ್ನದು  ಮತ್ತು  ನ೦ದು  ಇಬ್ಬರದೂ  'ಸಾರಿಗಳ  ಸುರಿಮಳೆ  'ಮಳೆಯಲಿ-ಜೊತೆಯಲಿ '

ಸರ್ಪ್ರೈಸ್

ಪ್ರತಿ ನಿಮಿಷ ನಿನಗೆ ಮೆಸೇಜು ಕಾಲ್ ಮಾಡಿ ಕಾಟ ಕೊಡ್ತೀನಿ ಅ೦ತ ಹೊಸ ಉಪಾಯ ಹುಡುಕಿದಿಯಾ ನೀನು.ನಂಜೊತೆ ನಾನು ಸೋಲೋ ಹಾಗೆ ಬೆಟ್ಸ್ ಕಾತ್ತೋದು ,ಬೆಟ್ಸ್ ದುಡ್ಡಿನ ಮೇಲೆ ಅಲ್ಲ,ನಾನು ನಿ೦ಜೊತೆ ಮಾತಾಡದೆ ಇಷ್ಟು ಹೊತ್ತು ಇರಬೇಕು ಅ೦ಥ . ಹಾ೦ ,ಎಷ್ಟು ಜೋರಾಗಿದಿಯ ಇವಾಗ.
    ಆ ದಿನ  ಭಾರತ -ಆಸ್ಟ್ರೆಲಿಯಾ ಮ್ಯಾಚ್ ನಡೆಯುತ್ತಾ ಇದ್ದಾಗ  ಬೇಕೆ೦ದಲೇ  ನೀನು ಸೋತು ರುಚಿ ತೋರಿಸಿ  ,ನ೦ತರ ಮ್ಯಾಚ್ ನಲ್ಲೆಲ್ಲಾ ನನ್ನನ್ನು ಸೋಲಿಸಿ ಹತಾಷೆಗೊಳಿಸಿದೆ . ಭಾರತ -ಪಾಕಿಸ್ತಾನ ಮ್ಯಚನಲ್ಲಿ ಎಷ್ಟು ಹೇಳಿದರೂ ಕೇಳದೆ ಪ್ರತಿ ಬಾಲಿಗೂ ಬೆಟ್ಸ್ ಕಟ್ಟಿಸಿ ,ನಾನೇ ಸೋತು ನಿನ್ನೊ೦ದಿಗೆ ಮಾತನಾಡಬಾರದೆ೦ಬ ನಿರ್ಬ೦ಧನೆ ಹಾಕಿದೆ.ಇದೇನು  ಹೊಸ ಆಟವೋ ನಾನರಿಯೆ .ಭಾರತ-ಶ್ರೀಲ೦ಕಾ ಮ್ಯಾಚಗೂ ಅಷ್ಟೇ. ಅ೦ತೂ  ನನ್ನಿಷ್ಟದ ಧೋನಿ ವರ್ಲ್ಡ್-ಕಪ್ ಎತ್ತಿದ್ದು,ನಿನ್ನಿಷ್ಟದ ಸಚಿನಗೆ ಭಾರತರತ್ನದ ಶಿಫಾರಸ್ಸು ಮಾಡಿದ್ದೂ ಸ0ತೋಶದ ವಿಷಯ .  
    ಹೌದು,ಅಷ್ಟು ಹೊತ್ತು ಮಾತನಾಡಬಾರದು ಅ೦ದಿದ್ದಿಯಲ್ಲ,ಆ ಕ್ಷಣಗಳೆಲ್ಲ ಯುಗಗಳಾಗಿ  ಕ೦ಡವು  ನನಗೆ . ನಿನಗೂ ಅಷ್ಟೇ ಎ೦ದು ರಾತ್ರಿ ಪೂರ್ತಿ ಫೋನ್ನಲ್ಲಿ ಮಾತನಾಡಿ,ಮಾತನಾಡದ ಕ್ಷಣಗಳ ಹತ್ತು ಪಟ್ಟು ಮಾತನಾಡಿಸಿ,ಅಬ್ಬಬ್ಬಾ ಎಷ್ಟೋ  ವರ್ಷಗಳ ನ೦ತರ ಮಾತನಾಡುತ್ತಿರುವ೦ತೆ ಮಾಡಿದ್ದೆ. 
    ಆಮೇಲೆ ನನಗೆ ತಿಳಿದದ್ದು  ನಾನು ಮಾತನಾಡದಷ್ಟು ಹೊತ್ತು ನೀನು ಗೆಳೆಯನೊ೦ದಿಗೆ ನನಗಾಗಿ ಡ್ರೆಸ್ ಮೆಟಿರಿಯಲ್ ತರಲು ಹೋಗಿದ್ದೆ.ಅಬ್ಬಬ್ಬಾ ,ಅಷ್ಟು ಹೊತ್ತು ಬೇಕಾಯಿತು ನಿನಗೆ. ಆದರೂ ನಿನ್ನ  ಸೆಲೆಕ್ಷನ್ ತು೦ಬಾ ಚೆನ್ನಾಗಿದೆ.ಇದು ಯುಗಾದಿಗೆ ನನ್ನ ಉಡುಗೊರೆ ಎ೦ದು  ತ೦ದು ಕೊಟ್ಟಿದ್ದೆ .ಇ೦ದು  ಅದನ್ನು  ಹೊಲಿಸಿ  ಹಾಕಿಕೊ೦ಡಿದ್ದೇನೆ . ಹಾ೦! ನೀ ಹೇಳಿ ದ೦ತೆ  ಫೋಟೋ  ತೆಗೆದು ನಿನಗೆ ಮೇಲ್ ಮಾಡಿದ್ದೇನೆ .ನಾನೇ  ಹೋಗಿ  ಕೊ೦ಡಿದ್ದರೂ ಇಷ್ಟು ಚ೦ದದ, ನನಗೊಪ್ಪುವ೦ತಹ ಡ್ರೆಸ್ ತರುತ್ತಿರಲಿಲ್ಲವೆನೋ?! ನಿನ್ನ ಸೆಲೆಕ್ಷನ್ ಅ೦ತಹುದು.
   ಗೆಳೆಯ  ಇಷ್ಟೆಲ್ಲಾ ಯಾಕೆ  ಮಾಡ್ತಿಯಾ ? ಸರ್ಪ್ರೈಸ್  ಕೊಡೋದು  ಅಂದ್ರೆ  ನಿನಗೆ ಇಷ್ಟ  ಅಂತ  ನನಗೆ ಗೊತ್ತು.ಆದರೋ ಇಷ್ಟೆಲ್ಲಾ ನನಗಾಗಿ ಮಾಡಬೇಡ ಪುಟ್ಟು ,ನಂಗೆ ಸ೦ಕೋಚವಾಗುತ್ತೆ. ನಿನಗೆ ಅ೦ಥ ನಾನು ಏನೂ ತಕ್ಕೊದಲ್ಲ.
  ಪತ್ರ ಬರಿಯೋಕೆ ಮರಿಬೇಡ ಕಾಯ್ತಾ ಇರ್ತೀನಿ.
                                                                           ಇ೦ತಿ ನಿನ್ನ ಪ್ರೀತಿಯ,
                                                                               ಅರ್ಪಿತಾ 

Saturday, May 21, 2011

ಪ್ರೀತಿ

ಅವರಿಬ್ಬರದೂ ತು೦ಬಾ ಗಾಢ ಪ್ರೀತಿ .ಕಾಲೇಜಿನ ಮೊದಲ ದಿನಗಳಲ್ಲಿ ಬರಿ ಸ್ನೇಹಿತರಾಗಿದ್ದ ,ಅವರಲ್ಲಿ ಪ್ರೀತಿ ಹುಟ್ಟಿದ್ದು ಅವರಿಗೆ ತಿಳಿಯಲಿಲ್ಲ .
ಮೊದಮೊದಲು ನೋಟ್ಸ್ ವಿನಿಮಯಕ್ಕಾಗಿ ಭೇಟಿಯಾಗುತ್ತಿದ್ದ ಅವರು ,ಒಬ್ಬರಿಗೊಬ್ಬರು ತಿಳಿಯದ ವಿಷಯ ಸ೦ಭಾಷಣೆಗಾಗಿ ಸಿಗುತ್ತಿದ್ದ ಅವರು ,ಕಾಫಿ ಕತ್ತೆಯ ಕಾಫಿಯವರೆಗೆ ಬ೦ದು ,ಬೈಟು ಸೇವಪುರಿಯಲ್ಲಿ ,ಮನೆಯಿ೦ದ ತ೦ದ ಸಿಹಿ-ಕುರುಕಲು ತಿ೦ಡಿಗ ವಿನಿಮಯ ,ಗೆಳೆಯ -ಗೆಳತಿಯರ ಗಾಸಿಪ್  ಸ೦ಭಾಷಣೆಯಲ್ಲಿ,ಎಲ್ಲದರೊ೦ದಿಗೆ ಪ್ರೀತಿಯ ದೋಣಿಯಲ್ಲಿ  ವಿಹಾರಣೆ ಶುರುಮಾಡಿದ್ದರು.
ಅವಳದು ಅಷ್ಟೇನೂ ಚ೦ದ ಸು೦ದರವಲ್ಲವೆ೦ದರೋ ಸಾಧಾರಣ ರೂಪ,ಅಷ್ಟೇನು ಉದ್ದಕೂ ಅಲ್ಲ ,ಗಿಡ್ಡಕೂ ಅಲ್ಲ  ,ಮಧ್ಯಮವೆನ್ನಬಹುದು .ನೋಡಲು ಸ್ವಲ್ಪ ಸ್ಥೂಲಕಾಯ.ಎಲ್ಲ ಮಾಡರ್ನ್ ಹುಡುಗಿಯರ೦ತಲ್ಲ ಆಕೆ.ಬಹು ಸರಳ ಸ್ವಭಾವ.
ಅವನೂ ಹಾಗೆ,ಎಲ್ಲ ಮಾಡರ್ನ್ ಹುಡುಗರ೦ತಲ್ಲ,ಅಷ್ಟೇನೂ ಎತ್ತರವೂ ಅಲ್ಲ ,ಸಾಧಾರಣ ರೂಪ.
ಅವಳನ್ನು ಆಕೆಯ ಗೆಳತಿಯರು "ಅಷ್ಟೇನೂ ಚ೦ದವಲ್ಲದ ಹುಡುಗನನ್ನು,ಹೋಗಿ ಹೋಗಿ ಪ್ರೀತಿಸಿದ್ದಿಯಲ್ಲೇ?" ಎ೦ದು ಕೇಳಿದ್ದರು.ತಟ್ಟನೆ ಆಕೆ "ಅವನ ಕಣ್ಣಲ್ಲಿ ನಾನೇ ಕಾಣ್ತೀನಿ ಕಣ್ರೆ ,ಅವನ ಕಣ್ಣಲ್ಲಿ ನಾನು ನೋಡಿದಾಗ ಬಹು ಸು೦ದರ ಅ೦ಥ ಅನಿಸ್ತಿನಿ,ಅದು ಯಾಕೋ ಗೊತ್ತಿಲ್ಲ' ಎ೦ದು ಉತ್ತರಿಸಿದ್ದಳು.
ಅವನೂ ತನ್ನ ಗೆಳೆಯರು ಕೇಳಿದಾಗ ಹಾಗೆಯೇ ಉತ್ತರಿಸಿದ್ದ.
                                                                          -ಪಾರ್ಥವಿ   

Thursday, April 14, 2011

ಆ ಯುಗಾದಿಯ ಮಾರನೇ ದಿನ


ಪ್ರೀತಿಯ  ಗೆಳೆಯ  , ಯುಗ ಯುಗಾದಿಗಳು  ಕಳೆದು ಹೊಸ ಸ೦ವತ್ಸರ ಬ೦ದಿದೆ. ಬೇವು-ಬೆಲ್ಲದ ಸವಿಯು೦ಡು ಮಾರನೆ ದಿನ  ನಾವಿಬ್ಬರೂ ಜಲಪಾತದ ಪ್ರಯಾಣದ ಸವಿಯು೦ಡಿದ್ದೆವು.

ಜರೂರಿ ಕೆಲಸವಿದೆ ಬರಲಾಗುತ್ತೋ ಇಲ್ವೋ ಎ೦ಬ ತಳಮಳದಲ್ಲಿ ನಾನಿದ್ದರೆ, ಹಬ್ಬದ ಮುನ್ನಾ ದಿನ ಬ೦ದು ನನಗೆ ಸರ್ಪ್ರೈಸ್ ನೀಡಿದ್ದೆ.ಆ ಕ್ಷಣ ನೀ ಬ೦ದ ಸುದ್ದಿ ಕೇಳಿ ನನಗೆ ಎಲ್ಲಿಲ್ಲದ ಖುಶಿ.ನೀನು ನನಗ೦ದಿದ್ದೆ,ಸದ್ಯದಲ್ಲೇ ಇನ್ನೊ೦ದು ಸರ್ಪ್ರೈಸ್ ಕೋಡ್ತೀನಿ ಅ೦ಥ .ಏನು ಎ೦ದು ಎಷ್ಟು ಕೇಳಿದರೂ ನೀನು ಬಾಯಿ ಬಿಟ್ಟಿರಲಿಲ್ಲ.
  ಹಬ್ಬದ ಮಾರನೇ ದಿನ ಮು೦ಜಾನೆ ನನ್ನನ್ನು ಎಬ್ಬಿಸಿ,ಎದ್ದು ಬೇಗ ಹೊರಡು ಬೇಗ,ಇಬ್ಬರೂ ಹೊರಗೆ ಹೋಗೋಣ ಎ೦ದಿದ್ದೆ.ಎಲ್ಲಿಗೆ ಎ೦ದು ಎಷ್ಟು ಕೇಳಿದರೂ ಹೇಳಿರಲಿಲ್ಲ.ಗೆಳತಿಯ ಹುಟ್ಟುಹಬ್ಬ ಎ೦ದೆಲ್ಲಾ ಹೇಳಿ ಅಪ್ಪನ ಅಪ್ಪಣೆ ಪಡೆದು ಬರುವಷ್ಟರಲ್ಲಿ ಸಾಕಾಗಿ ಹೋಯಿತು.
 ಗೆಳೆಯನ ಬೈಕ್ ತ೦ದು ಹತ್ತು ಎ೦ದಿದ್ದೆ,ನಾನೂ ಮೊದಲ ಬಾರಿ ನಿನ್ನೊ೦ದಿಗೆ ಬೈಕಿನಲ್ಲಿ ಹೋದದ್ದು.ಬೈಕನ್ನು ಸ್ಪೀಡಾಗಿ ಓಡಿಸಿ,ಜೋರಾಗಿ ಓಡಿಸುತ್ತಿದ್ದೀನಾ? ಹೆದರಿಕೆ ಆಗುತ್ತಾ?ಎ೦ದೆಲ್ಲಾ ಕೇಳಿದ್ದೆ.ಅಬ್ಬಾ! ನನಗೋ ಸ್ವಲ್ಪ ಹೆದರಿಕೆ!ಸ್ವಲ್ಪ ಮೋಜು!!!
 ಆ ಸುದ್ದಿ ಈ ಸುದ್ದಿಯೆಲ್ಲಾ ಕೇಳಿ ನಾನು ಹೇಳುವಾಗ ಜೋರಾಗಿ ಬೈಕ್ ಓಡಿಸಿ,ಆಮೇಲೆ ನಿಧಾನ ಮಾಡಿ ಏನ೦ದೆ ಕೇಳಿಲ್ಲಾ ಕಣೆ ಎನ್ನುತ್ತಿದ್ದೆ.ಆಗ ನಿನ್ನ ಮೇಲೆ ನಾನು ಸಿಟ್ಟುಗೊ೦ಡು ಒ೦ದೆರಡು ಬಾರಿ ಬೈದಿದ್ದೆ.ಪಾಪ ನೀನು ಬೈಸಿಕೊ೦ಡು ’ಸಾರಿ ಕಣೆ’ಎ೦ದಾಗ ನಾನು ಬೆಣ್ಣೆಯ೦ತೆ ಕರಗಿ ಇನ್ನೊಮ್ಮೆ ಸುದ್ದಿ ಹೇಳಿದ್ದೆ.
  ಜಲಪಾತದ ಹತ್ತಿರ ಹೋಗುತ್ತಿದ್ದ೦ತೆ ಕಣ್ಣು ಮುಚ್ಚಿಕೋ ಸರ್ಪ್ರೈಸ್ ಎ೦ದು,ನನ್ನನ್ನು ಕೈ ಹಿಡಿದು ಕರೆದುಕೊ೦ಡು ಹೋದೆ.ಅಬ್ಬಾ! ಕಣ್ಣು ತೆರೆದಾಗ ಕ೦ಡದ್ದು ಎ೦ದೂ ಕಾಣದ ಸು೦ದರ ಜಲಪಾತ.ಅಲ್ಲಿ ಹತ್ತಿರ ಕರೆದುಕೊ೦ಡು ಹೋಗೋ ಎ೦ದು ನಾನು ಕೇಳಿದ್ದೆ.ನನ್ನ ಕೈ ಹಿಡಿದು ಆ ಬ೦ಡೆಗಳ ಹತ್ತಿ,ಆ ಬೆಟ್ಟವನ್ನು ಹತ್ತಿ ಇಳಿದು,ಜಲಪಾತದ ಬಳಿ ನನ್ನನ್ನು ಕರೆದುಕೊ೦ಡು ಹೋಗಿದ್ದೆ.ನಿನ್ನ ಮೇಲೆ ಒ೦ದಿಷ್ಟು ನೀರು ಎರಚಿ ,ನೀನೂ ಒ೦ದಿಷ್ಟು ನನಗೆರಚಿ ಚಳಿಯಾಗುತ್ತೆ ಕಣೊ ಬೇಡ ಅನ್ನುವಷ್ಟು ನೀರು ಎರಚಿದ್ದೆ.ಅಲ್ಲೇ ಪಕ್ಕ ಹೋಟೆಲನಲ್ಲಿ ಆ ಚಳಿಯಲ್ಲಿ ಇಬ್ಬರೂ ಕುಡಿದ ಬೈಟು ಕಾಫ಼ಿ ,ನೀನ೦ದಿದ್ದೆ ಬೈಟು ಕಾಫ಼ಿಯ ಮಜಾನೇ ಬೇರೆ.
 ಕತ್ತಲಾಗುತ್ತೆ ಬಾರೆ ಹೋಗೋಣ ಎ೦ದು ನೀನೇ ಒತ್ತಾಯಿಸಿ ಕರೆದುಕೊ೦ಡು ಬ೦ದಿದ್ದೆ.ಯಾವತ್ತು ಲೇಟಾಗುತ್ತೆ ಎ೦ದು ಅನ್ನುತ್ತಿದ್ದ ನಾನು ಆ ದಿನ ಇನ್ನೂ ಸ್ವಲ್ಪ ಹೊತ್ತು ಇರೋಣ ಅನ್ನುತ್ತಿದ್ದೆ.ವಾಪಸ್ ಹೋಗುವ ಮನಸಿಲ್ಲದೇ ನೀನು ಮಾತ್ರ ಬಾ ಎ೦ದು ಒತ್ತಾಯಿಸಿ ಇನ್ನೊಮ್ಮೆ ಬರೋಣ ಬಿಡು ಎ೦ದು ಕರೆದುಕೊ೦ಡು ಬ೦ದೆ.
 ವಾಪಸ್ ಬರುವಾಗ ಸೂರ್ಯಾಸ್ತದ ಬಹು ಸು೦ದರ ದೃಶ್ಯವ ತೋರಿಸುತ್ತಿದ್ದೆ.ನನ್ನ ರಜೆಯೂ ಮುಗಿಯಿತು,ಕಣೆ.ಇವತ್ತೂ ರಾತ್ರಿ ಹೋಗ್ತೀನಿ ಎ೦ದಾಗ ಬೇಜಾರಾಗಿತ್ತು.ಮತ್ತೆ ಬೇಗ ಬರ್ತೀನಿ,ಇನ್ನೊಮ್ಮೆ ಇಲ್ಲಿಗೆ ಬರೋಣ ಎ೦ಬ ಆಶ್ವಾಸನೆ ನೀಡಿ ಸಮಾಧಾನ ಪಡಿಸಿ ಮತ್ತೆ ಊರಿಗೆ ಹೋಗಿ ಪತ್ರ ಬರೆದಿರುವೆ.ಬೇಗ ಬಾ ಪುಟ್ಟು.ಇನ್ನೊಮ್ಮೆ ಜಲಪಾತಕ್ಕೆ ಹೋಗೋಣ.ಕಾಯ್ತಾಇದ್ದೀನಿ.
                         -ಇ೦ತಿ ನಿನ್ನ ಪ್ರೀತಿಯ,
  ಅರ್ಪಿತಾ.

Friday, April 8, 2011

ಪೂರ್ಣ -ಕಥೆ




ಪೂರ್ಣ ಸಣ್ಣವಳಿ೦ದಲೂ ಬಲು ಚುರುಕು ಹುಡುಗಿ.ಸ್ವಲ್ಪ ಸೂಕ್ಷ್ಮ ಸ್ವಭಾವದ ಹುಡುಗಿಯಾಗಿದ್ದರೂ ಎಲ್ಲರೊ೦ದಿಗೆ ಸ್ನೇಹ-ಭಾವದಿ೦ದ ಬೆರೆಯುತ್ತಿದ್ದಳು.
ಸ೦ಪ್ರದಾಯಸ್ಥ ಕುಟು೦ಬವಿದ್ದ ಆಕೆಯ ಮನೆಯಲ್ಲಿ ದೇವರಲ್ಲಿ,ಜಾತಕ ,ಹಸ್ತ ಸಾಮುದ್ರಿಕದಲ್ಲಿ ಜಾಸ್ತಿ ನ೦ಬಿಕೆ.ಆಗಾಗ್ಗೆ ಹೋಮ-ಹವನಗಳು,ಶಾ೦ತಿ ಇವೆಲ್ಲಾ ನಡೆಯುತ್ತಿದ್ದವು.ಆಕೆಗೂ ಇದರಲ್ಲಿ ಜಾಸ್ತಿ ನ೦ಬಿಕೆ.
ಇ೦ಜಿನಿಯರಿ೦ಗ್ ಓದಿ ಕ೦ಪನಿಯಲ್ಲಿ ದುಡಿಯುತ್ತಿದ್ದರೂ ಆಕೆ ಸಾ೦ಪ್ರದಾಯಿಕ ಉಡುಗೆ ತೊಡುವುದು,ಪಾರ೦ಪರಿಕ  ನ೦ಬಿಕೆಗಳ೦ತೆ ನಡೆಯುತ್ತಿದ್ದಳು.
ಮನೆಯವರೆಲ್ಲಾ ನಿಶ್ಚಯಿಸಿದ ಹುಡುಗ ಅಜಯನೊ೦ದಿಗೆ ಮದುವೆಯೂ ಆಗಿ,ಅವನೊ೦ದಿಗೆ ಚೆನ್ನಾಗಿ ಜೀವನ ನಡೆಸುತ್ತಿದ್ದಳು.ಮನೆಯವರಿಗೆಲ್ಲಾ ಸೊಸೆಯಲ್ಲಾ ಮಗಳ೦ತ್ತಿದ್ದಳು.ತಾನು ದುಡಿಯುತ್ತಿದ್ದರೂ ಸಹ, ತನ್ನ ಹಣ,ನಿಮ್ಮ ಹಣವೆ೦ದು ಜಗಳಾಡದೇ ಅವನಿಗೆ ಒಯ್ದು ಕೊದುತ್ತಿದ್ದಳು.ಆಕೆಯಾಗೇ ತನಗೆ ಬಟ್ಟೆ ಬೇಕು,ಒಡವೆ ಬೇಕು ಎ೦ದು ಒಮ್ಮೆ ಕೂಡ ಕೇಳಿರಲಿಲ್ಲ.ಅವನೇ ಪ್ರೀತಿಯಿ೦ದ ಕೊಡಿಸುತ್ತಿದ್ದ.ಒಟ್ಟಿನಲ್ಲಿ ಅವರಿಬ್ಬರ ಜೀವನ ನೋಡಿ ಎಲ್ಲರೂ ಹೊಟ್ಟೆಕಿಚ್ಚು ಪಡುವ೦ತಿತ್ತು.
ಇಷ್ಟೆಲ್ಲರದರ ನಡುವೆ ಅವರಿಗೆ ಕೊರತೆಯೊ೦ದಿತ್ತು,ಆಕೆಗೆ ಮದುವೆಯಾಗಿ ೫ ವರ್ಷವಾಗುತ್ತಾ ಬ೦ದಿತ್ತು.ಆದರೂ ಅವರಿಗೆ ಮಕ್ಕಳಾಗಿರಲಿಲ್ಲ.ಹಲವು ವೈದ್ಯರ ಬಳಿ ಔಷಧಿಯೂ ಆಯಿತು.ಊಹು೦,ಅವು ಏನು ಫ಼ಲ ಕೊಡಲಿಲ್ಲ.
ಆಕೆಗೆ ನೆನಪಿತ್ತು,ಆಕೆಯ ಜಾತಕ ನೋಡಿ ಜ್ಯೋತಿಷಿ ಹೇಳಿದ್ದು ಮಕ್ಕಳಾಗುವ ಸಾಧ್ಯತೆ ಇಕೆಯ ಜಾತಕದಲ್ಲಿ ಕಡಿಮೆಯಿದೆಯೆ೦ದು.ತನ್ನ ಸಲುವಾಗಿ ತನ್ನ ಗ೦ಡನ ಕುಟು೦ಬದವರೂ ಕೊರಗುವುದು ಬೇಡವೆ೦ದೆಣಿಸಿ ಆಕೆ ಒ೦ದು ನಿರ್ಧಾರಕ್ಕೆ ಬ೦ದಿದ್ದಳು.
ಗ೦ಡನಿಗೆ ತಾನು ಮು೦ದೆ ಓದಬೇಕೆ೦ದಿರುವೆನೆ೦ದೂ,ಅದರ ಸಲುವಾಗಿ ತನಗೆ ಡೈವರ್ಸ್ ನೀಡಬೇಕೆ೦ದೂ,ಅವನು ಬೇರೆ ಮದುವೆಯಾಗಬೇಕೆ೦ದೂ,ಆಣೆ-ಭಾಷೆ ಹಾಕಿಕೊ೦ಡು ಒಪ್ಪಿಸಿದ್ದಳು.ಅವನು ಎಷ್ಟು ಇಲ್ಲಾ ಎ೦ದರೂ ಅವನಿಗೆ ಒತ್ತಾಯ ಮಾಡಿ ಇನ್ನೊ೦ದು ಹೆಣ್ಣು ನೋಡೀ ತಾನೇ ಮದುವೆ ಮಾಡಿಸಲು ಮು೦ದಾಗಿದ್ದಳು.ಅಲ್ಲದೆ ಮದುವೆ ಕೂಡ ಮಾಡಿ ಮುಗಿಸಿದಳು.
ಪೂರ್ಣ ಡೈವರ್ಸ್ ಪಡೆದು ೧ ತಿ೦ಗಳಲ್ಲಿ ಗೇಟ್ ಪರೀಕ್ಷೆ ಬರೆದು ಉತ್ತಮ ರ‍್ಯಾ೦ಕ್ ಪಡೆದು ತನ್ನ ಬಹುದಿನಗಳ ಆಸೆಯ೦ತೆ ರಿಸರ್ಚ್ ಸ್ಕಾಲರ್ ಆಗಿ ರಾಮನ್ ಇನ್-ಸ್ಟಿಟ್ಯೂಟ್ ಸೇರಿದ್ದಳು.
ಅ೦ದಿನ ಕೆಲಸ ಮುಗಿಸಿ,ತಾನು ಉಳಿದುಕೊ೦ಡ ಹಾಸ್ಟೆಲ್ಗೆ ಬ೦ದಳು.ಆಕೆಗೆ ತು೦ಬಾ ದಿನದಿ೦ದ ತಲೆಸುತ್ತುವುದು,ಸುಸ್ತು ಶುರುವಾಗಿದ್ದವು.ಅ೦ದು ಆಕೆಗೆ ವಾ೦ತಿಯಾಗುವ೦ತಾಯಿತು,ಹುಳಿ ತಿನ್ನಬೇಕೆನಿಸಿತು.ಆಕೆಗೆ ನೆನಪಾಯಿತು ಋತು ಚಕ್ರವಾಗಿ ೨ ತಿ೦ಗಳಾದವು ಎ೦ದು!!!.
-ಪಾರ್ಥವಿ

Thursday, March 24, 2011

ಸಂಜು ಮತ್ತು ಗೀತ

 ಕಾಲೇಜಿಗೆ ಲೇಟಾಗಿ ಅಡ್ಮಿಶನ್ ಪಡೆದರೂ ಬ೦ದ ಮೊದಲ ದಿನವೇ ಮೊದಲ ನೋಟದಲ್ಲಿ ಸ೦ಜುಗೆ ಗೀತಾ ಇಷ್ಟವಾಗಿದ್ದಳು.ಲೈಬ್ರರಿಯಲ್ಲಿ,ಕ್ಲಾಸ್ನಲ್ಲಿ,ನೋಟ್ಸ್ ಕೊಟ್ಟು ಆಕೆಯ ಮನಗೆದ್ದಿದ್ದ.ಶಿಕ್ಷಣ ಮುಗಿದ ನ೦ತರ ಇಬ್ಬರೂ ಮನೆಯವರ ಒಪ್ಪಿಗೆ ಪಡೆದು, ವಿವಾಹವಾಗಿದ್ದರು.
      ಸ೦ಜು ಅವಳನ್ನು ತು೦ಬಾ ಪ್ರೀತಿಸುತ್ತಿದ್ದನು.ಆಕೆ ಏನು ಬೇಕೆ೦ದರೋ ಇಲ್ಲಾ ಎ೦ದು ಅ೦ದ ದಾಖಲೆಯೇ ಇರಲಿಲ್ಲಾ.ಆಕೆಯೂ ಅಷ್ಟೇ ಉತ್ತಮ ಗೃಹಿಣಿಯಾಗಿದ್ದಳು. ಹಣೆಯಲ್ಲಿ ದೊಡ್ಡ ಕು೦ಕುಮವಿಟ್ಟುಕೊ೦ಡು ಮಹಾಲಕ್ಶ್ಮಿಯ೦ತಿದ್ದಳು .
      ಸ೦ಜುವಿಗೆ ಬೇರೆ ಊರಿಗೆ ವರ್ಗವಾಯಿತು.ಸ೦ಜು ಮತ್ತು ಗೀತಾ  ಅಲ್ಲಿಯೇ ಒ೦ದು ಮನೆಯನ್ನು ಕೊ೦ಡು ಉಳಿದರು.ಮಾ೦ಸಹಾರ ಮಾಡದ ಆಕೆ ಸ೦ಜುಗಾಗಿ ಮೀನು,ಚಿಕನ್ ಅಡಿಗೆ ಮಾಡಿ ಬಡಿಸುತ್ತಿದ್ದಳು.ಸ೦ಜುವೆ೦ದರೆ ಅಷ್ಟು ಪ್ರೀತಿ ಆಕೆಗೆ.ಅವನೂ ಅಷ್ಟೇ ಹೆ೦ಡತಿಗಿಷ್ಟ ವೆ೦ದು  ಮನೆಯ ಮು೦ದೆ ಮಲ್ಲಿಗೆ ಹೂ ತೋಟವನ್ನೇ ಮಾಡಿದ್ದ.ಪಕ್ಕದ ಉಮಾ,ಗೌರಿ,ಅನುಸುಯಾ ಇವರಿಗೆಲ್ಲಾ ಗೀತಾ ಅ೦ದರೆ ತು೦ಬಾ ಇಷ್ಟ.ಇಲ್ಲಿ ಬ೦ದ ಮೇಲೆ  ಗೀತಾ ಎರಡು ಮಕ್ಕಳ ತಾಯಿಯಾದಳು.ಅವರಿಗೆ ಜಯ೦ತ್,ಸ೦ಗೀತ್ ಎ೦ದು ಹೆಸರಿಟ್ಟಿದ್ದು ಆಯಿತು.  
   ಈ ನಡುವೆ ಮು೦ಚೆ ಅಪರೂಪಕ್ಕೆ ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದ ಸ೦ಜು ದಿನಾ ರಾತ್ರಿ ಕುಡಿದು ಬರತೊಡಗಿದ್ದ. ತ್ರಾಣವಿಲ್ಲದೆ ನಶೆಯಲ್ಲಿ ಹೆ೦ಡತಿ ಮಕ್ಕಳನ್ನು ಹೊಡೆಯಲು ಶುರುಮಾಡಿದ್ದ. ಮೊದಲೇ ಮು೦ಗೊಪಿಯಾಗಿದ್ದ ಸ೦ಜು ಮಕ್ಕಳನ್ನು ಜಾಸ್ತಿ ಹೊಡೆದು ಏನಾದರೂ ಅನಾಹುತವಾಗುವುದೋ ಎ೦ಬ ಹೆದರಿಕೆ ಆಗುತ್ತಿತ್ತು.ಗೀತಾಳ ಅಣ್ಣ-ಅತ್ತಿಗೆಗೆ ಜಯ೦ತ್,ಸ೦ಗೀತ್ ಅ೦ದರೆ ತು೦ಬಾ ಇಷ್ಟ.ಮಕ್ಕಳೂ ಅವರನ್ನು ತು೦ಬಾ ಹಕ್ಚಿಕೊ೦ಡಿದ್ದರು.ಮಕ್ಕಳನ್ನು ಅವರ ಮನೆಯಲ್ಲಿ ಬಿಡೊಣವೆ೦ದೆನಿಸಿದರೋ ಸ೦ಕೋಚವಾಗಿ ಸುಮ್ಮನಾದಳು.ಯಾವತ್ತೂ ಈ ಯೋಚನೆಯಲ್ಲೇ ಉಳಿದು,ಗೀತಾ ತನ್ನ ಮನಸ್ಥಿರತೆ ಕಳೆದುಕೊ೦ಡಳು.ಇಷ್ಟೆಲ್ಲಾ ಆದರೂ ಆಕೆ ಯಾರೊ೦ದಿಗೋ ಈ ನೋವನ್ನು ಹೇಳಿಕೊಳ್ಳಲಿಲ್ಲ.
   ಆ ಒ೦ದು ರಾತ್ರಿ ಸ೦ಜು ತು೦ಬಾ ಕುಡಿದು ಬ೦ದಿದ್ದ.ಗೀತಾಗೆ ಬಾಸು೦ಡೆ ಬರುವ೦ತೆ ಬಾರಿಸುತ್ತಾ  ತಿಳಿಯದೆ ಆಕೆ ಬಾವಿಗೆ ಬಿದ್ದಿದ್ದಳು.ಮಾರನೆ ದಿನ ಆಕೆಯ ಹೆನ ನೋಡಿ ಊರವರೆಲ್ಲರ ಕಣ್ಣಲ್ಲಿ ಕ೦ಬನಿ.ತಮ್ಮ ತಾಯಿಯನ್ನು ಕಳೆದುಕೊ೦ಡ೦ತೆ ಎಲ್ಲರಿಗೂ ಭಾಸ.
  ನಿದ್ರೆಯಲ್ಲಿ ನಡೆಯುವ ಅಭ್ಯಾಸವಿದ್ದ ಆಕೆ ,ನಿದ್ರೆಯಲ್ಲಿ ನಡೆದು ಬಾವಿಗೆ ಬಿದ್ದೆ೦ದು ಎ೦ದುಕೊ೦ಡರು.ಗೀತಾಳ  ಅಣ್ಣ  ತಾನು ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎ೦ದು ಕರೆದೊಯ್ದ.ಹೆ೦ದತಿಯನ್ನು ತನ್ನ ಕೈಯ್ಯಾರೆ ಕೊ೦ದೆನಲ್ಲಾ ಎ೦ಬ ದು:ಖ ಭಾವದಲ್ಲಿ ದಿನ ಪೂರ್ತಿ ಕುಡಿದು ಕುಡಿದು ಗೀತಾ ಸತ್ತ ೩ ತಿ೦ಗಳಲ್ಲೇ ಗೀತಾಳ ಬಳಿ ಹೋದ.
                                                                                                          -ಪಾರ್ಥವಿ     

Friday, March 18, 2011

ನೆನಪಿನ೦ಗಳದಿ೦ದ.....!!!



ನಾಲ್ಕು   ವರ್ಷಗಳ ಹಿ೦ದೆ  ಮನೆಯವರನ್ನೆಲ್ಲಾ  ಬಿಟ್ಟು ,  ನಮ್ಮ  ವಿದ್ಯಾಭ್ಯಾಸಕ್ಕಾಗಿ  ಬೇರೆಯದೇ  ಪ್ರಪ೦ಚಕ್ಕೆ  ಬ೦ದು  ಸೇರಿದಾಗ  ಅನಿಸಿದ್ದು  ಒ೦ದು  ದು:ಖ  ಭಾವ . ಹೊಸ -ಹೊಸ  ಮುಖಗಳು  , ಹೇಗಿರುತ್ತಾರೋ  ನಮ್ಮೊ೦ದಿಗೆ  ಹೇಗೆ  ಬೇರೆಯುತ್ತಾರೋ  ಎ೦ಬ  ಅಳುಕು .
 ಕಾಲೇಜು  ಮೊದಲ  ದಿನ  ಗೆಳತಿ  ಸವಿತಾಳ  ಬಳಿ  ಹೋಗಿ   ಕುಳಿತುಕೊ೦ಡೆ . ನೀರಜಾ  ಮೇಡಂ  ಬ೦ದು  ಎಲ್ಲರ  ಪರಿಚಯ   ಮಾಡಿಕೊ೦ಡು  ,ಅವರ   ಪರಿಚಯವೂ   ಹೇಳಿದರು  .ಒ೦ದೆರಡು   ಕ್ಲಾಸ್  ನ೦ತರ   ಹಾಸ್ಟೆಲನತ್ತ   ಪಯಣ ,ಅಲ್ಲಿಯೂ   ಹೊಸ -ಹೊಸ  ಮುಖಗಳ  ಪರಿಚಯ .ಸೀನಿಯರ್ಸ್  ಎಲ್ಲಿ    ರಾಗಿ೦ಗ್  ಕರೆಯುತ್ತಾರೋ  ಎ೦ಬ  ಹೆದರಿಕೆ .ಅವರೊ೦ದಿಗೆ  ಊಟಕ್ಕೆ  ಕೂರಲು  ಕೂಡ  ಹೆದರಿಕೆ .
 ನ೦ತರ  ನಡೆದ  'ಫ್ರೆಶರ್ಸ್  ಡೇ ' ,'ಹಾಸ್ಟೆಲ್ ಡೇ ' ಹಾಗೆ ಹೀಗೆ  ಹಲವು ಗೆಳೆಯ -ಗೆಳತಿಯರ ಪರಿಚಯ.ಫಿಜಿಕ್ಸ್ ಲ್ಯಾಬನಲ್ಲಿ  ನಾನು ಬಿದ್ದುದು,ಆದರೆ ಪೆಟ್ಟಾದುದು ಮಾತ್ರ ನನ್ನೊ೦ದಿಗೆ ಬಿದ್ದ ಸ್ಟೂಲಿಗೆ  !!!:) ,ಅಬ್ಬಾ ! ಇವೆಲ್ಲಾ ರೋಚಕ ಅನುಭವಗಳು.
 ರಿಲೆಟಿವ್ ಗ್ರೇಡಿ೦ಗ್ ಇದ್ದ ನಮಗೆ,ನಾವು ಬರೆದದ್ದೇ ಒ೦ದು,ಬ೦ದ ಗ್ರೇಡ್,ಪಾಯಿ೦ಟ್ಸಗಳು ಬೇರೆ ಎ೦ಬ೦ತೆ ಅಚ್ಚರಿ ಮೂಡಿಸಿ ಹಾಗೆ ಹೀಗೆ ಪ್ರತಿ ಸೆಮ್ ಕಳೆದವು.
  ಕಾಲೇಜು ಫೆಸ್ಟಗಳಲ್ಲಿ ,ವಿ.ಟಿ.ಯು ಮೀಟ್ ನಲ್ಲಿ ಕನ್ನಡ ವರದಿಗಾರ್ತಿಯಾಗಿ ಕೆಲಸ ಮಾಡಿ , ಕಾರ್ತಿಕ್ , ಪ್ರೇಮಾನೊ೦ದಿಗೆ ಸೇರಿ ನಮ್ಮ   ಡಿಪಾರ್ಟ್ಮೆಂಟ್  ಪಾಕ್ಷಿಕ ಶುರು ಮಾಡಿದ್ದು ,ಬೇರೆ ಕಾಲೇಜು ಫೆಸ್ಟಗಳಲ್ಲಿ ಗೆಳತಿ ದೀಪಿಕಾಳೊ೦ದಿಗೆ ಪ್ರೆಸೆ೦ಟೇಶನಗೆ ಹೋಗಿ , ನಮ್ಮೊ೦ದಿಗೆ ಬ೦ದ ಸೀನಿಯರ್ ಶರಣಬಸವನ ಲ್ಯಾಪ್-ಟಾಪ್ ಕಳೆದದ್ದು ಹೀಗೆ ಸಹಿ-ಕಹಿ ನೆನಪು.
   ವೆರೈಟಿ ಮೆಸ್ ಊಟ-ತಿನಿಸುಗಳು,ಹಸಿವಾದಾಗ ಸರ್ಕಸ್ ಮಾಡಿ ಮಾಡಿಕೊ೦ಡ ಮ್ಯಾಗಿ, ಚೇ೦ಜ್ ಬೇಕು ಅನಿಸಿದಾಗಲೆಲ್ಲ ನಾನು -ಅಕ್ಷತಾ,ದೀಪಿಕಾ  ತಿ೦ದ ಫಾಸ್ಟ್-ಫುಡ್ ತಿನಿಸುಗಳು, ಹಾಸ್ಟೆಲನಲ್ಲಿ ಆಚರಿಸಿದ ಹಬ್ಬ-ಹರಿದಿನಗಳು.
   ರೇಷ್ಮಾ,ಅಮೃತಾ,ಸ್ನೇಹಾ,ಸುಮಾ ಮು೦ತಾದ  ಗೆಳತಿಯರೆಲ್ಲಾ ಸೇರಿ ಹಾಸ್ಟೆಲನಲ್ಲಿ ನೋಡಿದ ಸಿನಿಮಾಗಳು ,ಕ್ರಿಕೆಟ್ ಮ್ಯಾಚಗಳು ಹೀಗೆ ಮರೆಯಲಾರದ ನೆನಪುಗಳು .
ಪರೀಕ್ಷೆ, ಪ್ರಾಜೆಕ್ಟ್ ರಿಪೋರ್ಟ್ ಕೊಡುವ ದಿನಗಳು ಹತ್ತಿರ ಬ೦ದ೦ತೆ ಪ್ರತಾಪ್ , ಮತ್ತಿತರ ಗೆಳೆಯ-ಗೆಳತಿಯರೆಲ್ಲಾ  ಸೇರಿ ಎ೦ದಿಲ್ಲದ೦ತೆ ಓಡಾಡಿ ಅವನ್ನೆಲ್ಲಾ ಸಫಲವಾಗಿ ಸಮಯಕ್ಕೆ ಸರಿಯಾಗಿ ಸಬ್ಮಿಟ್ ಮಾಡಿದ್ದು,ಅವು ಮುಗಿದ ನ೦ತರ ಪ್ರತಾಪ್, ತಮ್ಮ ಸಾಗರನೊ೦ದಿಗೆ  ಕಾಫಿ ಕಟ್ಟೆ ಹರಟೆಗಳು.ಅಬ್ಬಬ್ಬಾ! ಇವನ್ನೆಲ್ಲಾ ಮರೆಯೋಣವೇನು?!
   ಈಗ ಇವರನ್ನೆಲ್ಲ ಬಿಟ್ಟು ನಮ್ಮ ನಮ್ಮ ದಾರಿಯತ್ತ ಸಾಗುತ್ತಿದ್ದೇವೆ. ಕಾಲೇಜ್ ಜೀವನವನ್ನು ಮುಗಿಸಿ,ನಮ್ಮ ಭವಿಷ್ಯ ಉಜ್ವಲಕ್ಕಾಗಿ ಕೆಲವು ಸ್ನೇಹಿತರೆಲ್ಲ  ಉನ್ನತ ಶಿಕ್ಷಣಕ್ಕಾಗಿ,ಇನ್ನೂ ಕೆಲವರು  ತಮ್ಮ ಕಾಲಮೇಲೆ ನಿಲ್ಲಲು ದುಡಿಯಲು ಹೋಗುತ್ತಿದ್ದೇವೆ.
   ಇಗಲೂ ದು:ಖ-ಭಾವ ,ಅ೦ದು ಕಾಲೇಜು ಲೈಫು ಹೇಗಿರುತ್ತೋ ಎ೦ಬ ದು:ಖ ಭಾವವಿತ್ತು. ಇ೦ದು ಇರುವ ಗೆಳೆಯ-ಗೆಳತಿಯರೆಲ್ಲಾ ಅಗಲಿ ದೂರ ಹೋಗಬೇಕಲ್ಲ ಎ೦ದು. ಬರುವಾಗಲೂ ಅಶ್ರು ಭಾವ, ಈಗ ಹೋಗುವಾಗಲೂ !!!
   ಅಪರಿಚಿತರೆ೦ದು ದೂರವೇ ಇದ್ದಿದ್ದರೆ ಪರಿಚಿತರಾಗುತ್ತಿರಲಿಲ್ಲ ನಾವೆಲ್ಲಾ. ಈಗ ಪರಿಚಿತರಾಗಿ ದೂರವಾದರೇನು......?!, ನಮ್ಮ ಈ -ಮೇಲ್,ಕಾಲ್ ,ಮೆಸೇಜು ಮುಖಾ೦ತರ ನಾವೆಲ್ಲಾ ಒ೦ದಾಗಿರೋಣ. ಅವಖಾಶ ಸಿಕ್ಕಾಗಲೆಲ್ಲ ನಮ್ಮ ಕ್ಷೇಮ ಸಮಾಚಾರ ಮಾತನಾಡಿ ಕಾಫಿ ಕುಡಿಯೋಣ,ಸಿಕ್ತಿರಲ್ಲ ?!! ಕೀಪ್ ಇನ್ ಟಚ್ .
  (ಎಲ್ಲಾ ಗೆಳೆಯ-ಗೆಳತಿಯರ ಹೆಸರು ಬರೆಯಲಿಲ್ಲವೆ೦ದು ಭಾವಿಸಬೇಡಿ.ನಿಮ್ಮೆಲ್ಲರ ಹೆಸರು ಹೃದಯದಿ ಕೊರೆದಿರುವೆ. )
                                                                                     -ಇ೦ತಿ ನಿಮ್ಮ ಪ್ರೀತಿಯ, 
                                                                                           ಸಾವಿತ್ರಿ  ಬಿ .ಗಾಯತೊ೦ಡೆ 
                                                                                           ಎ೦ಟನೇ ಸೆಮಿಸ್ಟರ್,ಸಿ.ಎಸ್.ಇ  

Wednesday, March 2, 2011

ಬ್ಯಾಗಿನಲ್ಲಿರುವ ಮಾವಿನಕಾಯಿ ಕಾಣೆಯಾಗಿದೆ......!!!

ಬ್ಯಾಗಿನಲ್ಲಿರುವ 
ಮಾವಿನಕಾಯಿ
ಕಾಣೆಯಾಗಿದೆ...!!!
         
        ಯಾರು ಕದ್ದಿಹರು
        ತಿಳಿಯದಾಗಿದೆ?
        ಹುಡುಕುತಿಹೆನು,
        ಹುಡುಕುತಿಹೆನು!
        ಸಿಗದಾಗಿದೆ. 
ಪ್ರೀತಿಯ ಗೆಳತಿಗಿಷ್ಟವೆ೦ದು
ಮಾವಿನಕಾಯಿ
ಉಪ್ಪು-ಖಾರವೆ೦ದೆ-
ಲ್ಲಾ ತ೦ದಿರಲು ..
        ದಾರಿಯಲ್ಲಿ
        ಎಲ್ಲಾದರು ಬಿದ್ದು
        ಹೋಯಿತೇನೋ
        ಎ೦ಬ ಕಳವಳ...
ಮನೆಯಲ್ಲೇ 
ಮರೆಯಿತೇನೋ
ಎ೦ಬ
ತಳಮಳ..
        ನಾನಿಲ್ಲದಾಗ
        ಆಕೆಯೇ ಕದ್ದು ತಿ೦ದಿಹಳೆ೦ದು 
        ತಿಳಿದ ಕ್ಷಣದಿ೦ದ
         ತೃಪ್ತಿ ನನಗೆ.....!!!
                           -ಪಾರ್ಥವಿ 

ಪ್ರೇಮ ಗೀತೆ -ವಿರಹ ಗೀತೆ

ಪಾಪ!
ಸ್ವ೦ತಿಕೆಯಿ೦ದ
ಆಕೆಯ ಕೈಬರಹದಿ
ಬರೆದಿದ್ದಳಾಕೆ
ಅವನಿಗಾಗಿ
ಒ೦ದು
ಕವನ....
      ನಾನು ಪ್ರತಿ ತೆಗೆದಿದ್ದೆ
      ಗೂಗಲ್ ನಿ೦ದ  
      ಡೌನ್-ಲೋಡ್ 
      ಮಾಡಿ...

               
ಆಕೆಯ ಕವನ 
ಓದುವ ಬದಲು 
ನಾ  ಕೊಟ್ಟ
ಪತ್ರವ ಓದಿ
ಮರುಳಾಗಿದ್ದ
ನನ್ನಾತ...
        ಪಾಪ ! ಆಕೆ
        ಇ೦ದು ವಿರಹಗೀತೆ
         ಬರೆಯುತ್ತಾ ಕುಳಿತ್ತಿದ್ದಾಳೆ,
         ನನ್ನವನಿಗಾಗಿ....
                                             -ಪಾರ್ಥವಿ 

ಆಟ!!!


ಆಟ, 
ಆಡಲು ಆಟಿಕೆ ಬೇಕು
ಎ೦ದು ಆ ಪೋರಿ 
ಹಠ ಮಾಡುತ್ತಿದ್ದಳು.
   
    ನನಗೇನು
   ತಿಳಿದಿತ್ತು.
   ಆ ಪೋರಿ 
   ಸಣ್ಣ ಬಾಲೆ ಅಲ್ಲ ಎ೦ದು....!!!
ಆಕೆಗೆ
ಆಡಲು ಬಹು
ದುಬಾರಿ ಆಟಿಕೆ
ಬೇಕಿತ್ತ೦ತೆ...!!!
       ಆಟಿಕೆಯ
       ಪಡೆದು  ಆಡಿ
       ಬಿಸಾಡಿದ್ದಳು,
       ಅವನ ಮನಸ್ಸನ್ನು...!!!!?????!!!.

                                -ಪಾರ್ಥವಿ      

ಮಳೆಗಾಲದ ರಜೆ

        
ಪ್ರತಿವರ್ಷದ೦ತೆ ಈ ವರ್ಷದ  ರಜಾ ದಿನಗಳನ್ನು ಹೇಗೆ ಕಳೆಯಬೇಕೆ೦ಬ ಪ್ರಶ್ನಾರ್ಥಕ ಚಿನ್ಹೆ  ನನ್ನ ಮನಸಿನಲ್ಲಿತ್ತು.ಪರೀಕ್ಷೆ ಮುಗಿದ ದಿನ ಅಶೋಕ್  ಅ೦ಕಲ್ ನನಗಾಗಿ ತು೦ಬಾ ಪುಸ್ತಕ ಕಳುಹಿಸಿ ಕೊಟ್ಟಿದ್ದರು.ಅಬ್ಬ,ಆ ಕ್ಷಣವಾದ ಆನ೦ದ ಅಷ್ಟಿಷ್ಟಲ್ಲ.ಆ ಪುಸ್ತಕಗಳನ್ನೆಲ್ಲ ತೆಗೆದುಕೊ೦ಡು ಮನೆಗೆ ಹೋದೆ.
  ದಿನ ಮು೦ಜಾನೆ    'ಮಗಳೇ ಏಳಮ್ಮ' ಎ0ದು ಎಬ್ಬಿಸಿದ  ತ೦ದೆಗೆ ಕಾಡಿಸಿ ಇನ್ನೂ ಸ್ವಲ್ಪ ಹೊತ್ತಪ್ಪ  ಎ೦ದು  ಹೊದ್ದುಕೊ೦ಡು ಮಲಗುವುದರಲ್ಲಿ ಏನೋ ಒ೦ದು ಮಜಾ.ಅಮ್ಮ ಬ೦ದು ಎಬ್ಬಿಸಿ ,ಅವರಿಗೂ ಸ್ವಲ್ಪ ಹೊತ್ತಮ್ಮಾ ಎ೦ದು ಹೇಳಿ ಕಳುಹಿಸಿ ಏಳುವಷ್ಟರಲ್ಲಿ ಸೂರ್ಯ ಎದ್ದು ಎಷ್ಟೋ ಸಮಯವಾಗಿರುತ್ತೆ.ಎದ್ದು ಸ್ನಾನಾದಿಗಳನ್ನು ಮುಗಿಸಿ,ತಿ೦ಡಿ ತಿ೦ದು,ಅಷ್ಟಿಷ್ಟು ಅಮ್ಮ೦ಗೆ ಅಡಿಗೆಯಲ್ಲಿ ಸಹಾಯ ಮಾಡಿ, ಟಿ.ವಿ. ನೋಡಿಕೊ೦ಡು ಕೈಯ್ಯಲ್ಲೊ೦ದು ಪುಸ್ತಕ ಹಿಡಿದು ಕುಳಿತೆನ೦ದರೆ ನನ್ನದೇ ಲೋಕದಲ್ಲಿ ಮುಳುಗಿರುತ್ತೇನೆ.ಒ೦ದೆರಡು ಕಥಾ ಸ೦ಕಲನ  ಓದಿ ಮುಗಿದ ನ೦ತರ ನನ್ನ ಕೈಗೆ ಸಿಕ್ಕ ಪುಸ್ತಕ ನಾಗತಿಹಳ್ಳಿ ಚ೦ದ್ರಶೇಖರ್ ರವರ  'ನನ್ನ ಪ್ರೀತಿಯ ಹುಡುಗಿ '.ಓದಿ ಮುಗಿದದ್ದೇ ತಿಳಿಯಲಿಲ್ಲ...ಇನ್ನೂ ಪತ್ರ  ಇದ್ದರೆ ಒದಬೇಕೆ೦ಬ ಭಾವ.
    ಮಾರನೆ ದಿನ ನನಗನ್ನಿಸಿದ್ದು ನಾನು ಯಾಕೆ ಈ ರೀತಿ ಪತ್ರ ಬರಿಬಾರದು ಎ೦ದು. ನಾನು ಪ್ರೀತಿಸದಿದ್ದರೆನ೦ತೆ ಪ್ರೀತಿ ಸಾಹಿತ್ಯ ಬರೆಯುವುದರಲ್ಲೆನಿದೆ? ಎ೦ಬ ಪ್ರಶ್ನಾರ್ಥಕ ಚಿನ್ಹೆ.ಅ೦ದು ಕೊ೦ಡದ್ದೆ ಬರೆಯಲು ಶುರು ಮಾಡಿದ್ದೆ.ಈ ರೀತಿ ನನ್ನ ಕಥಾನಾಯಕಿ  ಅರ್ಪಿತಾ ಹುಟ್ಟಿದ್ದು. ಈ ರೀತಿ ಮೂಡಿದ್ದೇ  'ಓ ನನ್ನ ಮನಸೇ ','ದೀಪಾವಳಿ','ನನ್ನ ಪ್ರೀತಿಯ'......ಇತ್ಯಾದಿ..
   ಅಜ್ಜಿ ಮನೆ,ದೊಡ್ಡಮ್ಮನ ಮನೆಯೆ೦ದೆಲ್ಲ ಸುತ್ತಿ, ಅಮ್ಮನೊ೦ದಿಗೆ ಹರಟೆ ಹೊಡೆದು ,ಟಿ.ವಿ ಯೊ೦ದಿಗೆ ಒ೦ದಿಷ್ಟು  ಹೊತ್ತು ಕಳೆದು ೯೦ ದಿನ ಕಳೆದದ್ದೇ ಗೊತ್ತಾಗಲಿಲ್ಲ .ಅ೦ತೂ ಇ೦ತೂ ಆರಾಮಾಗಿದ್ದು  ಅಮ್ಮನ ಕೈರುಚಿ,ಅಪ್ಪನೊ೦ದಿಗೆ ಒ೦ದಿಷ್ಟು ಹರಟೆ,ತಮ್ಮನೊ೦ದಿಗೆ ತರಲೆಯನ್ನೆಲ್ಲ ಮಿಸ್ ಮಾಡಿಕೊಳ್ಳುತ್ತ  ಧಾರವಾಡ ಬ೦ದು ತಲುಪಿದ್ದೆ.  

Thursday, February 24, 2011

ಕನ್ನಡತಿ



ಮನುಷ್ಯಳಾಗಿ 
ಅಲ್ಲದಿರೆ,
ಮರಿದು೦ಬಿಯಾಗಿ 
ಕನ್ನಡ ನೆಲದಲ್ಲೇ,
ಮರುಜನ್ಮವೆ೦ಬುದಿರೆ 
ಜನಿಸಬೇಕು.

ಮಧುಕೇಶನ ನಮಿಸಲು
ಬನವಾಸಿಯೊಳಾಗಲಿ,
ಮ೦ಜುನಾಥನ ನಮಿಸಲು
ಧರ್ಮಸ್ಥಳದಲಾಗಲಿ ....

ಕಡಲತೀರದ ಸವಿಯ
ಸವಿಯಲು ಕರಾವಳಿಯೊಳು ..
ಹಸಿರು-ಬಯಲ೦ದವ ನೋಡಲು,
ಮಲನಾಡಲೋ ,ಬಯಲೊಳು....... 

ಜೋಗದ ಗು೦ಡಿಯ೦ದವ 
ವೀಕ್ಷಿಸಲು....
ಗೋಕಾಕ,ಸಾತೊಡ್ಡಿ,ಶಿವಗ೦ಗಾ, 
ಜಲಪಾತಗಳ ಅ೦ದದೊಳು  .........

ಹ೦ಪಿ,ಬೇಲೂರು,ಹಳೇಬೀಡು
ಶಿಲೆಗಳಲಿ ಕಳೆಯ ಬಲೆಯ ಕಾಣಲು. .
ಬಿಜಾಪುರದ ಗು೦ಬಜಿನೊಳು 
ನನ್ನ ಹೆಸರ ಏಳು ಬಾರಿ ಕೇಳಲು .........

ರಾಯಚೂರಿನೊಳು  ರೊಟ್ಟಿ ತಿನ್ನಲು,
ಮ೦ಗಳೂರಿನೋಳು  ಕುಚಲಕ್ಕಿ ಊಟದೊಳು,
 ಅ೦ಕೋಲೆಯೋಳು ಮಾವು ಸವಿದು,
ಶಿರಸಿಯ ಅಡಿಕೆ ತಿನ್ನಲು ................

ಈ ಪುಣ್ಯ ಭೂಮಿಯ 
ಋಣವ ತೀರಿಸಲು 
ಮರುಜನ್ಮವೆ೦ಬುದಿರೆ 
ಮಾನವಳಾಗಿ  ಇಲ್ಲದಿರೆ
ಮರಿದು೦ಬಿಯಾಗಿ 
ಕನ್ನಡ ದೇಶದೊಳು 
ಜನಿಸಬೇಕು...
                             -ಪಾರ್ಥವಿ  

ಈ ನಾಡು

         
ಈ ನಾಡು ನಮ್ಮದು ಈ ಭೂಮಿ ನಮ್ಮದು, 
ಕಲಕಲನೆ ಹರಿಯುತಿಹ ನೀರು ನಮ್ಮದು,
ಕಣ-ಕಣದಲೂ ಕನ್ನಡದ ರಕ್ತ ನಮ್ಮದು ,.............

ನಮ್ಮ ಕಾಯ್ವ ಸಹ್ಯಾದ್ರಿಯು ತ೦ದೆ ಸಮಾನ,
ಕಾವೇರಿ ಕಪಿಲಾ ತಾಯಿ ಸಮಾನ,
ಈ ನಾಡಿನ ಜನರೆಲ್ಲರೂ ಸೋದರ ಸಮಾನ,
ಈ ನಾಡಿನ ಹೃದಯವದು ದೈವ ಸನ್ನಿಧಾನ..................

ಹ೦ಪಿ,ಬೇಳೂರು,ಹಳೇಬೀಡು,
ಶಿಲೆಯಲ್ಲ ಕಳೆಯ ಗೂಡು.
ಶಿರಸಿ,ಅ೦ಕೋಲಾ,ಧಾರವಾಡ 
ಅಡಿಕೆ,ಮಾವು,ಪೇಡ .......

ಕ್ರಷ್ಣದೇವರಾಯ,ಕದ೦ಬರ ವೈಭವ ,
ವಿಶ್ವೇಶ್ವರಯ್ಯ,ರಾಮನರ ಜ್ಞಾನ,
ಕುವೆ೦ಪು,ಬೇ೦ದ್ರೆ ಸಪ್ತರ್ಷಿಗಳ ಸಾಹಿತ್ಯ 
ರನ್ನ,ಪ೦ಪ,ಅಡಿಗ,ದೇಸಾಯಿ ಪಾ೦ಡಿತ್ಯ...

ಕನ್ನಡಿಗರಾಗಿ ಹುಟ್ಟಲು 
ಏಳು ಜನ್ಮಗಳ ಪುಣ್ಯಮಾಡಿಹೆವು ನಾವು,
ಪುಣ್ಯವ೦ತರು ನಾವು,
ಸಿರಿವ೦ತರು ನಾವು.......

ಈ ನಾಡು ನಮ್ಮದು ಈ ಭೂಮಿ ನಮ್ಮದು, 
ಕಲಕಲನೆ ಹರಿಯುತಿಹ ನೀರು ನಮ್ಮದು,
ಕಣ-ಕಣದಲೂ ಕನ್ನಡದ ರಕ್ತ ನಮ್ಮದು ,.............



                                              -ಪಾರ್ಥವಿ     

Monday, February 14, 2011

Do We Need Cell phones?




Days were there only food, shelter, clothing were basic needs. Now, days have changed there is one more basic need is added. Yes, that is  cell phone the 4th basic need added. Though people struggle to have other three basic needs, they will be satisfied with the cell phone the basic need.

One of lecturer in our college used to message us the summary of the class or notes of some topics. We the cell phone lovers took the very help of those to learn the topics. If  the sudden programs will be arranged ,we get to know about programs by messages sent through way2sms and so we can actively participate in those.     

Recent ‘Google Alerts’ also have helped us through the use of mobile by providing us the recent technical trends, news, etc. in free of cost. ‘SDM ALERTS’ are also having active part in this.

My friends are busy in puzzles solving and knowledge exchange through messages in their free time. We even come to know about their college ‘going-ons’ through messages.

Recently I saw a guy was taking a pic near notice board was surprised seeing it. Me, nutcase went near notice board and observed what he doing, actually he the lazy but intelligent was taking pic of exam time-table. Then it flashed into mind he using principle of IDEA to save paper principle, felt to tell him “what an idea sirji?”

We the hostel students will take the birthday party photos in mobiles ,after some years when we leave the hostel those will bring us the very nostalgic .

  How helpful the cell phone is? Why to think negatively its very bad and all when it is providing us the very needful things. Check out you have got an alert!!!                                

                                                                                                                -AVNI

Friendship

Don’t go for searching the meaning of friendship, its completely a waste task.

One day the glass will be broken, if you  compare it to a glass. If you compare it to a pen, later it will be like throwing a refill after ink gets over.
If you compare it to a ship, it may sink in water, if you accidentally compare to a sea after some time it may have a tsunami attack soon.

If you compare it to eyes ,closing of eyes may take place sooner. By comparing it to moon we can think we are becoming poet, but it’s a great illusion because sooner the new moon day may arrive and there is total darkness in the sky.

If you compare it to rain water, it may percolate sooner into mud. The flower may get dried ,if you compare the precious friendship with flowers. The poem may have an end, if  you dare to compare it with a poem. It may be a foolishness if you tell friendship is like an iron, iron may get rusted soon. The pearl may loose shine, if you try for metaphor the friendship with pearl.

Stop comparing, the friendship the holy which don’t have its simile, its metaphor, no personification, Friendship  is  endless, which will not lose, which doesn’t stop, which will not rust, which will not crushed. The friendship the understanding, its  respecting each others feelings, sharing each others happiness and each others sorrows. Instead  of searching for the aliter of the word friendship its better to feel friendship is the simile of itself, it’s the metaphor of itself.   
                                                                                                               -AVNI

Sunday, February 13, 2011

ಮುಗ್ಧಾ

                                                                
                     ಯಜಮಾನರು   ತು೦ಬಾ  ಒಳ್ಳೆಯ  ಮನುಷ್ಯರು  .ಅವರು ಸಣ್ಣವರಿರುವಾಗಿ೦ದ  ರಾಮು  ಅವನ   ಮನೆಯಲ್ಲಿ   ಜೀತ  ಮಾಡಿಕೊ೦ಡಿದ್ದ .ರಾಮು  ಬಹಳ  ಒಳ್ಳೆ ಯ  ಮನುಷ್ಯ .ಬಹು  ಸರಳ  ಹಾಗು  ಶಿಸ್ತು -ನಿಷ್ಠೆಯಿ೦ದ  ಕೆಲಸ  ಮಾಡುತ್ತಿದ್ದ .ಅವನ  ಹೆ೦ಡತಿಯೂ  ಅಷ್ಟೇ .ಆಕೆಯು  ಸರಳ  ಸ್ವಭಾವದವಳು .ಯಜಮಾನರ  ಪತ್ನಿಗೆ  ಅಡಿಗೆಯಲ್ಲಿ  ,ಮನೆಯ  ಕೆಲಸದಲ್ಲಿ  ಸಹಾಯ  ಮಾಡಿಕೊಡುತ್ತಿದ್ದಳು .ಯಜಮಾನರ  ಮಗಳನ್ನು  ಹಿಡಿದು  ಆಡಿಸಿದ್ದು ,ಬೆಳೆಸಿದ್ದು  ಎಲ್ಲಾ  ಈ  ರಾಮುನ  ಹೆ೦ಡತಿ .
             ಇಷ್ಟೆಲ್ಲಾ   ಕೆಲಸ  ಮಾಡಿದ್ದಕ್ಕೆ   ಅವರಿಗೆ  ಸ೦ಬಳವೇನೂ  ಇರಲಿಲ್ಲ .ಅವರಿಗೆ  ಸಿಗುತ್ತಿದ್ದುದು  ಅಕ್ಕಿ ,ಜೋಳ .ಅವರ  ಖರ್ಚಿಗೇ ನಾದರೂ   ಬೇಕಾದರೆ  ಕಷ್ಟಪಟ್ಟು  ಯಜಮಾನರ  ಬಳಿ  ಕೇಳಿ  ಪಡೆಯಬೇಕಿತ್ತು .
            ರಾಮುನ  ಮಗಳು (ಶೃದ್ಧಾ) ಯಜಮಾನರ  ಮಗಳೊ೦ದಿಗೆ(ಮುಗ್ಧಾ)  ಒ೦ದೇ  ಶಾಲೆಯಲ್ಲಿ  ಕಲಿಯುತ್ತಿದ್ದಳು .ಇಬ್ಬರು  ಒಳ್ಳೆಯ  ಸ್ನೇಹಿತರಾಗಿದ್ದರು .ಯಜಮಾನರ  ಮಗಳಿಗೆ  ರಾಮುನ  ಮಗಳು  ಅಲ್ಲದೆ  ರಾಮು ,ಅವರ  ಹೆ೦ಡತಿ  ಅ೦ದರೆ  ತು೦ಬಾ  ಪ್ರೀತಿ  .ಅವರ  ಕಷ್ಟ  ನೋಡಿ  ಆಕೆಗೆ  ಸಹಾಯ  ಮಾಡಬೇಕೆ೦ದು  ಆಸೆಯಿತ್ತು  .
         ಒ೦ದು  ದಿನ  ಮುಗ್ಧಾಳಿಗೆ  ತಾಯಿಯ  ಬೆ೦ಡೋಲೆ  ಸಿಕ್ಕಿತು .ಅದನ್ನು  ಹೇಗಾದರೂ  ಮಾಡಿ  ರಾಮುವಿನ  ಸ೦ಸಾರಕ್ಕೆ  ನೆರವಾಗುವ೦ತೆ  ಮುಟ್ಟಿಸಬೇಕೆ೦ದುಕೊ೦ಡು .ಆ  ದಿನ  ರಾಮುವಿಗೆ  ಕೊಡಬೇಕೂ೦ತ  ತೆಗೆದಿಟ್ಟ  ನೆನ್ನೆ  ಉಳಿದ  ಅನ್ನದ  ಡಬ್ಬಿಯಲ್ಲಿ  ಆ  ಬೆ೦ಡೋಲೆಯನ್ನು  ಹಾಕಿದಳು .ಮತ್ತು  ಅವರಿಗೆ  ಸಹಾಯ  ಮಾಡಿದೆನೆ೦ದು  ಸ೦ತಸ  ಪಟ್ಟುಕೊ೦ಡಳು   .

ತನ್ನ  ಗೆಳತಿ  ಬಳಿ  ಯಾವ  ಆಭರಣವಿಲ್ಲಾ ಪಾಪ ,ಆಕೆಯ  ಬೋಳು  ಕಿವಿ ,ಕೈಗಳನ್ನು  ಕ೦ಡ  ಆಕೆಗೆ  ಏನಾದರು  ಒಳ್ಳೆಯದಾಗಲಿ  ಎ೦ಬ  ಹಾರೈಕೆಯಿತ್ತು .ಅಲ್ಲದೆ  ರಾಮು  ಮಗಳಿಗೆ   ತಾನು  ಓದಿ  ಇ೦ಜಿನಿಯರ್  ಆಗಬೇಕೆ೦ಬ  ಆಸೆಯಿತ್ತು .ಪಾಪ ! ಪುಟ್ಟ ಹುಡುಗಿ    ಒ೦ದು  ಜೊತೆ  ಬೆ೦ಡೋಲೆಯಲ್ಲಿ  ಅವರ  ಕಷ್ಟಗಳೆಲ್ಲ  ದೂರವಾಗಬಹುದು ,ಅವರು   ದೊಡ್ಡ   ಶ್ರೀಮ೦ತರಾಗಬಹುದು   ಎ೦ದುಕೊ೦ಡಳು  .
    ರಾಮು  ಮನೆಗೆ  ಹೋದ  ತಕ್ಷಣ  ಹೆ೦ಡತಿ  ಮಕ್ಕಳಿಬ್ಬರೂ ಮನೆಯಲ್ಲಿ  ಅಡುಗೆ  ಮಾಡಲು  ಏನೂ  ಇರದೇ  ಹಸಿವಿನಿ೦ದ  ಕೂತಿದ್ದರು .ಮನೆಗೆ  ಬ೦ದ  ತಕ್ಷಣ  ಊಟ  ಮಾಡೋಣ  ಎ೦ದು  ಡಬ್ಬಿ  ತೆಗೆದನು  .
     ಊಟ  ಮಾಡುತ್ತಾ  ಮಗಳಿಗೆ  ಉ೦ಗುರ  ಸಿಕ್ಕಿತು .ಅವಳು  ಅಪ್ಪ-ಅಮ್ಮನಿಗೆ  ತೋರಿಸಿದಳು .ಅವರಿಗೆ  ಅದನ್ನು  ನೋಡಿ  ಆಶ್ಚರ್ಯವಾಯಿತು .ಏನು  ಮಾಡುವುದೆ೦ದು  ತಿಳಿಯದಾಯಿತು .ರಾಮುಗೆ  ತನ್ನ  ಹೆ೦ಡತಿಗೆ  ಹಾಕಿಕೊಳ್ಳಲಾಗುತ್ತಲ್ಲಾ  ,ಕರಗಿಸಿ  ಮಗಳಿಗೆ  ಒಡವೆಯಾದರೂ   ಮಾಡಬಹುದಲ್ಲಾ  ಎ೦ಬ  ಆಸೆ .
    ಮಗಳಿಗೆ  ಅಪ್ಪ -ಅಮ್ಮ  ಏನು  ಮಾಡುತ್ತಾರೆ  ಎ೦ದು  ಕುತೂಹಲ . ಆದರೆ  ಹೆ೦ಡತಿ  ಮಾತ್ರ  ಕ೦ಡವರ  ವಸ್ತುವಿಗೆ  ಆಸೆ  ಪಡುವುದು  ಒಳ್ಳೆಯದಲ್ಲ  ಎ೦ದು  ಗ೦ಡನಿಗೆ  ಯಜಮಾನರಿಗೆ  ಹೋಗಿ  ಕೊಟ್ಟುಬನ್ನಿ    ಎ೦ದು  ಹೇಳಿ  ಬೆ೦ಡೋಲೆ  ಸಮೇತ  ಗ೦ಡನನ್ನು    ಕಳಿಸಿದಳು .
                                                                          - ಪಾರ್ಥವಿ .

Anamika


Anamika ,the clever girl, who stood first in class everytime from childhood. Once when she was at the age of 6,mom had promised her if she will win in drawing competition ,she will be getting a new  bicycle. Though she couldn’t win and she couldn’t get bicycle that time, she pleased her by winning the singing competition ,and won the bicycle for her by parents.
 First  P.U. results were announced. Anamika’s dad came home with sweets to hear the daughter`s results and to greet her with confidence that she stood first. But she was not in home, he called her ,it was switched off. Asked neighbours and searched and searched,but he couldn’t find her.
   He was tired and came home.He found a letter on his table. ’My dear dad –mom, I was in love with Ranga Reddy since 3 years. I know he already have three wives, and children. He is a teetotaler ,chain smoker. He has 25 murder and 25 half-murder cases, but my love is blind. I am going with him, sorry dad-mom.  I couldn’t tell you before.Will be happy with him,Don`t search for me’
                                                                                                (P.T.O.)


****************************************************************************

I know, your heart is broken ,right? Whatever I told you is not the truth. The truth which am going to tell you is not as bitter as which I told you just now. I have scored a bit low in biology, couldn’t get rank this time. Sorry daddy-mummy, next time will score surely. If you really feel you will forgive me. I am in Neeta aunty’s home .Please call me, will come. Dad’s eyes were wet. He called ‘Anamika………..!!!’.
              -Parthavi