Thursday, February 24, 2011

ಈ ನಾಡು

         
ಈ ನಾಡು ನಮ್ಮದು ಈ ಭೂಮಿ ನಮ್ಮದು, 
ಕಲಕಲನೆ ಹರಿಯುತಿಹ ನೀರು ನಮ್ಮದು,
ಕಣ-ಕಣದಲೂ ಕನ್ನಡದ ರಕ್ತ ನಮ್ಮದು ,.............

ನಮ್ಮ ಕಾಯ್ವ ಸಹ್ಯಾದ್ರಿಯು ತ೦ದೆ ಸಮಾನ,
ಕಾವೇರಿ ಕಪಿಲಾ ತಾಯಿ ಸಮಾನ,
ಈ ನಾಡಿನ ಜನರೆಲ್ಲರೂ ಸೋದರ ಸಮಾನ,
ಈ ನಾಡಿನ ಹೃದಯವದು ದೈವ ಸನ್ನಿಧಾನ..................

ಹ೦ಪಿ,ಬೇಳೂರು,ಹಳೇಬೀಡು,
ಶಿಲೆಯಲ್ಲ ಕಳೆಯ ಗೂಡು.
ಶಿರಸಿ,ಅ೦ಕೋಲಾ,ಧಾರವಾಡ 
ಅಡಿಕೆ,ಮಾವು,ಪೇಡ .......

ಕ್ರಷ್ಣದೇವರಾಯ,ಕದ೦ಬರ ವೈಭವ ,
ವಿಶ್ವೇಶ್ವರಯ್ಯ,ರಾಮನರ ಜ್ಞಾನ,
ಕುವೆ೦ಪು,ಬೇ೦ದ್ರೆ ಸಪ್ತರ್ಷಿಗಳ ಸಾಹಿತ್ಯ 
ರನ್ನ,ಪ೦ಪ,ಅಡಿಗ,ದೇಸಾಯಿ ಪಾ೦ಡಿತ್ಯ...

ಕನ್ನಡಿಗರಾಗಿ ಹುಟ್ಟಲು 
ಏಳು ಜನ್ಮಗಳ ಪುಣ್ಯಮಾಡಿಹೆವು ನಾವು,
ಪುಣ್ಯವ೦ತರು ನಾವು,
ಸಿರಿವ೦ತರು ನಾವು.......

ಈ ನಾಡು ನಮ್ಮದು ಈ ಭೂಮಿ ನಮ್ಮದು, 
ಕಲಕಲನೆ ಹರಿಯುತಿಹ ನೀರು ನಮ್ಮದು,
ಕಣ-ಕಣದಲೂ ಕನ್ನಡದ ರಕ್ತ ನಮ್ಮದು ,.............



                                              -ಪಾರ್ಥವಿ     

No comments: