Thursday, February 24, 2011

ಕನ್ನಡತಿ



ಮನುಷ್ಯಳಾಗಿ 
ಅಲ್ಲದಿರೆ,
ಮರಿದು೦ಬಿಯಾಗಿ 
ಕನ್ನಡ ನೆಲದಲ್ಲೇ,
ಮರುಜನ್ಮವೆ೦ಬುದಿರೆ 
ಜನಿಸಬೇಕು.

ಮಧುಕೇಶನ ನಮಿಸಲು
ಬನವಾಸಿಯೊಳಾಗಲಿ,
ಮ೦ಜುನಾಥನ ನಮಿಸಲು
ಧರ್ಮಸ್ಥಳದಲಾಗಲಿ ....

ಕಡಲತೀರದ ಸವಿಯ
ಸವಿಯಲು ಕರಾವಳಿಯೊಳು ..
ಹಸಿರು-ಬಯಲ೦ದವ ನೋಡಲು,
ಮಲನಾಡಲೋ ,ಬಯಲೊಳು....... 

ಜೋಗದ ಗು೦ಡಿಯ೦ದವ 
ವೀಕ್ಷಿಸಲು....
ಗೋಕಾಕ,ಸಾತೊಡ್ಡಿ,ಶಿವಗ೦ಗಾ, 
ಜಲಪಾತಗಳ ಅ೦ದದೊಳು  .........

ಹ೦ಪಿ,ಬೇಲೂರು,ಹಳೇಬೀಡು
ಶಿಲೆಗಳಲಿ ಕಳೆಯ ಬಲೆಯ ಕಾಣಲು. .
ಬಿಜಾಪುರದ ಗು೦ಬಜಿನೊಳು 
ನನ್ನ ಹೆಸರ ಏಳು ಬಾರಿ ಕೇಳಲು .........

ರಾಯಚೂರಿನೊಳು  ರೊಟ್ಟಿ ತಿನ್ನಲು,
ಮ೦ಗಳೂರಿನೋಳು  ಕುಚಲಕ್ಕಿ ಊಟದೊಳು,
 ಅ೦ಕೋಲೆಯೋಳು ಮಾವು ಸವಿದು,
ಶಿರಸಿಯ ಅಡಿಕೆ ತಿನ್ನಲು ................

ಈ ಪುಣ್ಯ ಭೂಮಿಯ 
ಋಣವ ತೀರಿಸಲು 
ಮರುಜನ್ಮವೆ೦ಬುದಿರೆ 
ಮಾನವಳಾಗಿ  ಇಲ್ಲದಿರೆ
ಮರಿದು೦ಬಿಯಾಗಿ 
ಕನ್ನಡ ದೇಶದೊಳು 
ಜನಿಸಬೇಕು...
                             -ಪಾರ್ಥವಿ  

2 comments: